Saturday 5th, July 2025
canara news

ಲಕ್ಷದ್ವೀಪ ಸಮೀಪ ಮಂಗಳೂರಿನ ಎರಡು ಬೋಟ್ ಮುಳುಗಡೆ

Published On : 03 Dec 2017   |  Reported By : Canaranews network


ಮಂಗಳೂರು: ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳಿದ್ದ ಸರಕು ಸಾಗಣಿಕೆಯ ನೌಕೆಗಳು ಓಖಿ ಚಂಡಮಾರುತದ ಹೊಡೆತಕ್ಕೆ ಸಿಲುಕಿವೆ. ಈ ಪೈಕಿ ಲಕ್ಷದ್ವೀಪ ಸಮೀಪ ಎರಡು ನೌಕೆಗಳು ಮುಳುಗಡೆಯಾಗಿದ್ದು 1 ನೌಕೆ ಹಾನಿಗೊಂಡಿದೆ.ಮಂಗಳೂರು ಹಳೆ ಬಂದರಿನಿಂದ ಗುರುವಾರ ಸಿಮೆಂಟ್ ಹಾಗು ಜಲ್ಲಿಕಲ್ಲುಗಳನ್ನು ಹೊತ್ತು ಲಕ್ಷದ್ವೀಪಕ್ಕೆ ಮಂಜಿ ನೌಕೆಗಳು ತೆರಳಿದ್ದವು.

ಮುಳುಗಡೆಗೊಂಡ ಎರಡು ಮಂಜಿ ನೌಕೆಯಲ್ಲಿ ಒಟ್ಟು14 ಸಿಬ್ಬಂದಿಗಳಿದ್ದರು. ಅಪಾಯದಲ್ಲಿದ್ದ ಎಲ್ಲಾ ಸಿಬ್ಬಂದಿಗಳನ್ನು ಸ್ಥಳೀಯ ಮೀನುಗಾರರು ಹಾಗೂ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.ಈ ನಡುವೆ ಹಿಂದೂ ಮಹಾಸಾಗರದಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವ ಕರ್ನಾಟಕದ ಕರಾವಳಿಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ.ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here