Sunday 11th, May 2025
canara news

ಧರ್ಮದ ಹೆಸರಲ್ಲಿ ಹಿಂಸಾಚಾರ ಸೃಷ್ಟಿ – ಸಚಿವ ರೈ ಕಿಡಿ

Published On : 08 Dec 2017   |  Reported By : canaranews network


ಮಂಗಳೂರು: ಪ್ರಧಾನಿ ಮೋದಿಯ ಶಿಷ್ಯರು ದೇವರು, ದೇಶಪ್ರೇಮ ಎನ್ನುತ್ತಾ ಧರ್ಮದ ಮೂಲಕ ಹಿಂಸಾಚಾರ ಮಾಡುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಿಡಿ ಕಾರಿದ್ದಾರೆ.

ಮಂಗಳೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಸಚಿವರು, ಮೋದಿ ಧರ್ಮದ ಮೂಲಕ ಹಿಂಸಾಚಾರ ಮಾಡಬೇಡಿ ಎಂದು ದೇಶವ್ಯಾಪಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಅವರ ಶಿಷ್ಯರು ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುತ್ತಿದ್ದಾರೆ ಎಂದು ಹೇಳಿದರು.ಹನುಮಜಯಂತಿ ಆಚರಣೆಯ ವೇಳೆ ಸಂಸದರು ಸರಕಾರದ ಅಧಿಕೃತ ವಾಹನವನ್ನು ಚಾಲಕನ ಬದಲು ತಾನೇ ಖುದ್ಧಾಗಿ ಚಲಾಯಿಸಿದ್ದಾರೆ.

ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಬ್ಯಾರಿಕೇಡ್ ಮುರಿದು ವಾಹನವನ್ನು ಚಲಾಯಿಸಿಕೊಂಡು ಹೋಗಿರುವುದು ದೊಡ್ಡ ಅಪರಾಧ ಎಂದು ಸಚಿವರು ಹೇಳಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here