ಧರ್ಮಸ್ಥಳ:ಡಿಸೆಂಬರ್12; ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ 2017-18ನೇ ಶೈಕ್ಷಣಿಕ ವರ್ಷದ ಪ್ರತಿಭಾ ದಿನಾಚರಣೆಯು ಡಿಸೆಂಬರ್9 ರಂದು ಧರ್ಮಸ್ಥಳದ
“ಅಮೃತವರ್ಷಿಣಿ” ಸಭಾಭವನದಲ್ಲಿಜರುಗಿತು. ಪೂರ್ವಾಹ್ನ 8.45ಕ್ಕೆ ಶಾಲಾ ಸಂಚಾಲಕರಾದ ಶ್ರೀಯುತ ಅನಂತಪದ್ಮನಾಭ ಭಟ್ರವರು ದ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಬಳಿಕ 10.30ರ ಸಮಯಕ್ಕೆ ಸರಿಯಾಗಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದಂತಹ ಧರ್ಮಾಧಿಕಾರಿ, ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಶಾಲೆಯ ವಾರ್ಷಿಕ ಪತ್ರಿಕೆಗಳಾದಂತಹ ‘P’ನಸು’ ಹಾಗು ‘ಹೊಂಗನಸು’”ಬಿಡುಗಡೆಗೊಳಿಸಿದರು. ನಂತರ ಸರ್ವರನ್ನೂ ಉದ್ದೇಶಿಸಿ ಪಠ್ಯ ಚಟುವಟಿಕೆಗಳೊಂದಿಗೆ ಸಹಪಠ್ಯ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆ ಅತ್ಯಾವಶ್ಯಕ ಎಂದು ನುಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳಾ ಎಂ.ವಿ.ರವರು ಉಪಸ್ಥಿತರಿದ್ದರು.
ಪುಟಾಣಿಗಳ ನೃತ್ಯದೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನೇಕ ನೃತ್ಯಪ್ರಕಾರಗಳು ವಿವಿಧ ಭಾಷೆಗಳಲ್ಲಿ ಮೂಡಿಬಂದವು. ಅಂತೆಯೇ ಸಮೂಹಗೀತೆಗಳು ಅಗಾಗ್ಗೆ ಬಿತ್ತರಗೊಂಡು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದವು.
ಸದ್ರಿಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಯಾದಂತಹ ಗೊಪಾಲ ಕೃಷ್ಣ ಭಟ್, ಉಜಿರೆಯ ಸಿಬಿಎಸ್ಸಿ ಶಾಲಾ ಪ್ರಾಂಶುಪಾಲರಾದ ಶ್ರೀಯುತ ಮನಮೋಹನ್ ನಾಯಕ್, ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ಹಾಗು ಊರಿನ ಗಣ್ಯರು ಉಪಸ್ಥಿತರಿದ್ದರು ಮತ್ತು ವಿದ್ಯಾರ್ಥಿಗಳಿಗೆ ಮೆಚ್ಚುಗೆ ಸೂಚಿಸಿ ಹಾರೈಸಿದರು. ಕುಮಾರಿ ರಕ್ಷಿತಾ ದಾಸ್ ಮತ್ತು ದಿವಿತ ರಿಂದ ಆರಂಭಿಸಲ್ಪಟ್ಟ ಸದ್ರಿಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅನ್ವಿತಾ, ಸುಪ್ರೀತಾ, ಚಿನ್ಮಯಿ, ಕೃಪಾ ಎನ್, ಅನ್ವೇಷ್, ವಿಲಾಸ್, ಚಿದ್ವಿಲಾಸ್, ಆಶಿತಾ, ನಮಿತಾ, ಲೋಕೇಶ್ ಶಾಲಾನಾಯಕ ಶೋಧನ್ ಶಾಲಾ ವಾರ್ಷಿಕ ವರದಿಯನ್ನು ಹಂತ-ಹಂತವಾಗಿ ವಾಚಿಸಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನ 10ನೇ ತರಗತಿಯಲ್ಲಿ ಉನ್ನತದರ್ಜೆ ಪಡೆದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ಪ್ರಸಕ್ತ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಬಹುಮಾನ ನೀಡಿ ಪೆÇ್ರೀತ್ಸಾಹಿಸಲಾಯಿತು. ಸಹಶಿಕ್ಷಕಿ ಶ್ರೀಮತಿ ಕಮಲಾ ಜಿ ಹೆಗ್ಡೆ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.