Saturday 5th, July 2025
canara news

ಪೂಜಾರಿಯವರಿಗೆ ನಾನು ಬೈದಿದ್ದರೆ ದೇವರು ನೋಡಿಕೊಳ್ಳಲಿ.. ಅವರಿಗೆ ನಾನು ಏನೂ ಬೈದಿಲ್ಲ – ರೈ

Published On : 31 Dec 2017   |  Reported By : Canaranews network


ಮಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿರುವ ಬಿ.ಜನಾರ್ದನ ಪೂಜಾರಿ ಅವರ ಮೇಲೆ ನನಗೆ ಅಪಾರ ಗೌರವವಿದೆ. ಪೂಜಾರಿಯವರ ಕುರಿತು ನಾನು ಏನೂ ಮಾತನಾಡಿಲ್ಲ ಎಂದು ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.ಬಿ.ಸಿ.ರೋಡಿನ ಕಾಂಗ್ರೆಸ್ ಕಚೇರಿ ಬಳಿ ಮಾತನಾಡಿದ ಅವರು, ಪೂಜಾರಿ ಅವರ ಮೇಲೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ.

ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಪೂಜಾರಿಯವರನ್ನು ಭೇಟಿಯಾಗಿ ಅವರ ಜೊತೆ ಮಾತನಾಡಿದ್ದೇನೆ. ಪೂಜಾರಿಯವರ ವಿರುದ್ಧವಾಗಿ ನಾನು ಏನೂ ಮಾತನಾಡಿಲ್ಲ. ಕೆಲವರಿಂದ ಅವರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.ನಾನು ಪೂಜಾರಿಯವರನ್ನು ಬೈದಿರುವ ವಿಡಿಯೋ ಏಲ್ಲಿದೆ..? ಅವರಿಗೆ ನಾನು ಬೈದಿಲ್ಲ. ತಪ್ಪಾಗಿ ಅವರು ಅರ್ಥ ಮಾಡಿಕೊಂಡರೆ ದೇವರು ನೋಡಿಕೊಳ್ಳಲಿ. ಇವೆಲ್ಲಾ ಅವರ ಮತ್ತು ನನ್ನ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಸಲು ಮಾಡಿದ ಹುನ್ನಾರ ಎಂದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here