ಮುಂಬಯಿ, ಜ.11: ಜಪಾನ್ ರಾಷ್ಟ್ರದ ಸಂಸ್ಥೆಯು ಇತ್ತೀಚೆಗೆ ಮುಂಬಯಿನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಮಹಾರಾಷ್ಟ್ರ ರಾಜ್ಯ ಮಟ್ಟದಲ್ಲಿ ನಡೆಸಿದ 14ನೇ (ಯೂನಿವರ್ಸಲ್ ಕಾನ್ಸೆಪ್ಟ್ ಆಫ್ ಮೆಂಟಲ್ ಆ್ಯರಿತ್ಮೆಟಿಕ್ ಸಿಸ್ಟಂ) ಲೆಕ್ಕದ ಮನಿಚೌಕಟ್ಟು ಮತ್ತು ಮಾನಸಿಕ ಸಂಖ್ಯಾವಿದ್ಯಾ (ಯುಸಿಎಂಎಎಸ್) ಸ್ಪರ್ಧೆಯಲ್ಲಿ ವಿೂರಾರೋಡ್ ಪೂರ್ವದ ದಾಲ್ಮಿಯಾ ಹೈಸ್ಕೂಲ್ ವಿದ್ಯಾಥಿರ್sನಿ ಕು| ಸಿಯಾ ಭಾಸ್ಕರ್ ಶೆಟ್ಟಿ ತೃತೀಯ ರನ್ನರ್ ಆಫ್ ಸ್ಥಾನ ಪಡೆದ ಏಕೈಕ ಕನ್ನಡತಿ ಆಗಿದ್ದಾರೆ.
ಈಕೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪಾದೂರು ನಿವಾಸಿ ಸಿಎ| ಭಾಸ್ಕರ್ ಶೆಟ್ಟಿ ಹಾಗೂ ಉಡುಪಿ ಮಣಿಪುರ ಮೂಲತಃ ಭವಾನಿ ಬಿ.ಶೆಟ್ಟಿ ದಂಪತಿ ಸುಪುತ್ರಿಯಾಗಿರುವ ಈಕೆ ಪ್ರತಿಭಾನ್ವಿತ ತುಳುಕನ್ನಡತಿ ಆಗಿದ್ದಾರೆ.