ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವತಿಯಿಂದ ನಡೆಸುವ " ಕಲಿಯೋಣ ಕಂಪ್ಯೂಟರ್ - ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅರಿವು ಶಿಬಿರ " ಕಾರ್ಯಕ್ರಮವನ್ನು ಈ ಬಾರಿ ಕಳಸದ ಜೆ . ಇ. ಎಂ . ಪ್ರೌಢಶಾಲೆ ಯಲ್ಲಿ ನಡೆಸಲಾಯಿತು . ಈ ಶಿಬಿರವು ಜನವರಿ 17 ರಿಂದ 19 ರವರೆಗೆ ಮೂರು ದಿನಗಳ ಕಾಲ ಜರುಗಲಿದೆ .
ಶಿಬಿರವನ್ನು ಉದ್ಘಾಟಿಸಿದ ವಿಭಾಗದ ಮುಖ್ಯಸ್ಥ ಡಾ . ಮಂಜುನಾಥ ಕೊಠಾರಿ ಮಾತನಾಡಿ , " ಪ್ರತಿ ವರ್ಷ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದ ಕೊರತೆಯಿರುವ ಗ್ರಾಮೀಣ ಭಾಗಗಳ ಶಾಲೆಗಳಿಗೆ ತೆರಳಿ ಅಲ್ಲಿ ಮಕ್ಕಳಿಗೆ ಕಂಪ್ಯೂಟರ್ ಕಲಿಸುತ್ತಾರೆ. ಇದರ ಜೊತೆಗೆ ವೆಬ್ ಸೈಟ್ ತಯಾರಿ , ಇಂಟರ್ನೆಟ್ ಮತ್ತು ಪ್ರೋಗ್ರಾಮಿಂಗ್ ಬಗ್ಗೆಯೂ ತರಬೇತಿ ನೀಡಲಾಗುತ್ತದೆ" ಎಂದರು . ಕಳಸ ಶಿಕ್ಷಣ ಸೊಸೈಟಿ ಯ ಅಧ್ಯಕ್ಷರಾದ ಶ್ರೀಕಾಂತ್ ಶುಭ ಹಾರೈಸಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದ ಅಧ್ಯಕ್ಷ ಡಾ. ಮೋಹನ ಆಳ್ವರಿಗೆ ಕೃತಜ್ಞತೆ ಅರ್ಪಿಸಿದರು.
ಕಳಸ ಶಿಕ್ಷಣ ಸೊಸೈಟಿ ಕಾರ್ಯದರ್ಶಿ ಗೋಪಿನಾಥ್ ಪೈ , ಮುಖ್ಯ ಶಿಕ್ಷಕಿ ಸುನಂದಾ , ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾದ ಹೇಮಂತ್ , ಶ್ರುತಿ ಶೆಟ್ಟಿ , ವಿವೇಕ್ ಶರ್ಮ ಮತ್ತು ಅಂಕಿತಾ ಶೆಟ್ಟಿ ಉಪಸ್ಥಿತರಿದ್ದರು . ಕಾಲೇಜಿನ 18 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ತರಬೇತಿ ನೀಡಲಿದ್ದಾರೆ .