Tuesday 13th, May 2025
canara news

ಕಿಶೋರ್ ಕುಮಾರ್ ಎಂ.ಶೆಟ್ಟಿ ನೆರೂಲ್ ನಿಧನ

Published On : 05 Feb 2018   |  Reported By : Rons Bantwal


ಮುಂಬಯಿ, ಫೆ.05: ಧರ್ಮ ಶಾಸ್ತ ಭಕ್ತ ವೃಂದ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ, ನೆರೂಳ್ ಶ್ರೀಮಣಿಕಾಂದ ಸೇವಾ ಸಂಘಂ ಇದರ ಟ್ರಸ್ಟಿ, ನವಿಮುಂಬಯಿ ಹೊಟೇಲ್ ಓನರ್ಸ್ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರ ನೆರೂಲ್ ಇದರ ಸಕ್ರೀಯ ಕಾರ್ಯಕರ್ತ ಕಿಶೋರ್ ಕುಮಾರ್ ಎಂ.ಶೆಟ್ಟಿ (57.) ಇಂದಿಲ್ಲಿ ನವಿಮುಂಬಯಿ ಇಲ್ಲಿನ ಖಾಸಾಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಅಪಾರ ಸಾಮಾಜಿಕ ಕಾಳಜಿ ಹೊಂದಿದ್ದ ಕಿಶೋರ್ ಕುಮಾರ್ ಮುಂಬಯಿ, ನವಿ ಮುಂಬಯಿನÀಲ್ಲಿ ಸಮಾಜ ಸೇವೆಯಲ್ಲಿ ನಿರತರಾಗಿದ್ದು ಜನಾನುರೆಣಿಸಿದ್ದರು. ಮೃತರು ಪತ್ನಿ (ಪ್ರಮೋದ ಕೆ.ಶೆಟ್ಟಿ), ಒಂದು ಗಂಡು, ಎರಡು ಹೆಣ್ಣು ಸೇರಿದಂತೆ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂದಬಿದ್ರಿ ಮುಂಡ್ಕೂರು ಅಲ್ಲಿನ ಸಂಕಲ್‍ಕರಿಯ ಮೂಲತಃ ಕಿಶೋರ್ ಕುಮಾರ್ ಅವರು ಸದ್ಯ ನವಿಮುಂಬಯಿ ಸೆಕ್ಟರ್ 17ರ ನೆರೂಳ್ ಅಲ್ಲಿನ ನಂದನವನ ಬಿಲ್ಡಿಂಗ್‍ನ ನಿವಾಸಿ ಆಗಿದ್ದು, ನೂರಾರು ಗಣ್ಯರು, ಬಂಧುಗಳು ಮೃತರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಕೋರಿದರು. ನಂತರ ಇಂದು ಸಂಜೆ ನೆರೂಲ್‍ನ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲ್ಪಟ್ಟಿತು.
ಕಿಶೋರ್ ಕುಮಾರ್ ನಿಧನಕ್ಕೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here