Wednesday 14th, May 2025
canara news

ದುಡಿಮೆ ಮಾಡಿದ ಹಣದಿಂದ ಸೀರೆ ವಿತರಿಸಿದ್ದೇನೆ, ಯಾರಿಗೂ ನಾನು ಹೆದರಲ್ಲ - ಶಾಸಕ ಮೊಯ್ದೀನ್ ಬಾವಾ

Published On : 26 Feb 2018   |  Reported By : canaranews network


ಮಂಗಳೂರು: ಮಂಗಳೂರು ಹೊರವಲಯದ ಗಂಜಿಮಠ ವ್ಯಾಪ್ತಿಯ ಫಲಾನುಭವಿಗಳಿಗೆ ಶಾಸಕ ಮೊಯ್ದೀನ್ ಬಾವಾ ಗಂಜಿಮಠ ಸಭಾ ಭವನದಲ್ಲಿ ಸೀರೆ ಜತೆ ಹಕ್ಕುಪತ್ರ ವಿತರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.ನಾನು ಸೀರೆ ವಿತರಿಸಿದ್ದು ನನ್ನ ಸ್ವಂತ ದುಡಿಮೆಯ ಸಂಪಾದನೆಯಿಂದ.

ನಾನು ನನ್ನ ಜನುಮ ದಿನದ ನಿಮಿತ್ತ ದುಡಿಮೆಯ ಹಣದಿಂದ ಸೀರೆ ನೀಡಿದ್ದೇನೆ. ಇದನ್ನು ವಿತರಿಸಲು ನಾನು ಯಾರಿಗೂ ಹೆದರಲ್ಲ ಎಂದು ಹೇಳಿದರು.ಈ ಮುಂಚೆ ಸರ್ಕಾರಿ ಜಾಗದಲ್ಲಿ ಕುಳಿತವರಿಗೆ ಒಕ್ಕಲೆಬ್ಬಿಸುವ ಭೀತಿ ಇತ್ತು. ಅದಕ್ಕಾಗಿಯೇ ನಮ್ಮ ಸರ್ಕಾರ ಅವರ ಹಕ್ಕಿನ ಭೂಮಿಯನ್ನು ಒದಗಿಸಲು 94 ಸಿ ಹಾಗೂ 94 ಸಿಸಿ ಮುಖಾಂತರ ಕುಳಿತುಕೊಳ್ಳಲು ಅವಕಾಶ ನೀಡಿ ಹಕ್ಕುಪತ್ರ ನೀಡುತ್ತಿದೆ ಎಂದು ಹೇಳಿದರು.ನಳಿನ್ ಕುಮಾರ್ ಕಟೀಲ್ ನಯಾಪೈಸೆ ನೀಡಿಲ್ಲ.

ಮುಚ್ಚೂರು ರಸ್ತೆಯನ್ನು ನಳಿನ್ ಕುಮಾರ್ ಕಟೀಲ್ ನಿರ್ಮಿಸಿದ್ದಲ್ಲ. ಅದಕ್ಕೆ ಅನುದಾನ ಒದಗಿಸಿದ್ದು ನಾನು.ಆದರೆ, ಆ ರಸ್ತೆಯನ್ನು ತಾವು ಮಾಡಿದ್ದು ಎಂದು ಬಿಜೆಪಿಯವರು ಹೇಳಿಕೊಂಡು ಬರುತ್ತಿದ್ದಾರೆ. ನಳಿನ್ ಕುಮಾರ್ ಕಟೀಲ್ ಗಂಜಿಮಠ ಪಂಚಾಯಿತಿಗೆ ನಯಾಪೈಸೆ ಕೊಟ್ಟಿಲ್ಲ. ಶಾಸಕರ ನಿಧಿಯಿಂದ ಕೋಟಿ ಕೋಟಿ ಅನುದಾನ ನೀಡಿದ್ದು ನಾನು ಎಂದು ಹೇಳಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here