ಮಂಗಳೂರು: ಮಂಗಳೂರು ನಗರದಲ್ಲಿ 9 ವರುಷಗಳ ಹಿಂದೆ ನಡೆದಿದ್ದ ಪಬ್ ದಾಳಿ ಪ್ರಕರಣದ ಆರೋಪಿಗಳು ಖುಲಾಸೆಯಾಗಲು ಕಾರಣವಾದ ಅಂಶಗಳ ಕುರಿತು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ವರದಿ ಕೇಳಿದ್ದಾರೆ.ಮಾಧ್ಯಮದವರ ಜೊತೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಪ್ರಕರಣಗಳಲ್ಲೂ ಆರೋಪಿಗಳು ಖುಲಾಸೆಯಾಗುವ ಕುರಿತು ಪ್ರಾಸಿಕ್ಯೂಷನ್ ಇಲಾಖೆ ಪರಿಶೀಲನೆ ನಡೆಸಿ ವರದಿ ನೀಡುತ್ತದೆ.
ಹೀಗಾಗಿ ಪಬ್ ದಾಳಿ ಪ್ರಕರಣದ ಕುರಿತು ವರದಿ ನೀಡುವಂತೆ ನಾನು ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.ಆರೋಪಿಗಳು ದೋಷಮುಕ್ತಗೊಳ್ಳಲು ಕಾರಣವಾದ ಅಂಶಗಳು ಮತ್ತು ತನಿಖೆಯಲ್ಲಿನ ಲೋಪದ ಬಗ್ಗೆ ಪರಿಶೀಲನೆ ನಡೆಯಲಿದೆ. ತನಿಖಾಧಿಕಾರಿಗಳಿಂದ ಲೋಪ ಆಗಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ಪ್ರಾಸಿಕ್ಯೂಷನ್ ಇಲಾಖೆ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.