Wednesday 14th, May 2025
canara news

ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಗೆ ಹೊಸ ಪದಾಧಿಕಾರಿಗಳು

Published On : 28 Mar 2018   |  Reported By : Bernard J Costa


ಕುಂದಾಪುರ,ಮಾ.26: ಕುಂದಾಪುರ ವಲಯ ಮಟ್ಟದ ಕಥೊಲಿಕ್ ಸಭಾಸಮಿತಿಗೆ ಹೊಸ ಪದಾಧಿಕಾರಿಗಳ ಚುನಾವಣೆಯು ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಜರುಗಿತು. ಮೈಕಲ್ ಪಿಂಟೊ ಕೊಟೇಶ್ವರ, ಈ ಸಾಲಿನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಗೊಂಡರು, ಕಾರ್ಯದರ್ಶಿಯಾಗಿ ಲೀನಾ ತಾವ್ರೊ ಪಿಯುಸ್ ನಗರ್, ನಿಕಟ ಪೂರ್ವ ಅಧ್ಯಕ್ಷರು ಜೇಕಬ್ ಡಿಸೋಜಾ, ಕುಂದಾಪುರ, ನಿಯೋಜಿತ ಅಧ್ಯಕ್ಷರಾಗಿ ಮೇಬಲ್ ಡಿಸೋಜಾ ಬಸ್ರೂರು, ಉಪಾಧ್ಯಕ್ಷರಾಗಿ ವಿಲ್ಸನ್ ಡಿಆಲ್ಮೇಡಾ ಕುಂದಾಪುರ, ಸಹ ಕಾರ್ಯದರ್ಶಿಯಾಗಿ ವಿಲ್ಫ್ರೆಡ್ ಮಿನೇಜಸ್ ಪಿಯುಸ್ ನಗರ್, ಖಚಾಂಚಿಯಾಗಿ ಫ್ಲಾಯ್ವನ್ ಡಿಸೋಜಾ ಬಸ್ರೂರು, ಸಹ ಖಚಾಂಚಿಯಾಗಿ ವಿನಯ್ ಡಿಆಲ್ಮೇಡಾ ಪಡುಕೋಣೆ, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ವಾಲ್ಟರ್ ಡಿಸೋಜಾ ಕುಂದಾಪುರ, ರಾಜಕೀಯ ಸಂಚಾಲಕಾರಾಗಿ, ಆರ್ಚಿಬಾಲ್ಡ್ ಕ್ವಾಡರ್ಸ್ ಪಿಯುಸ್ ನಗರ್, ಸರ್ಕಾರಿ ಸವಲತ್ತು ಸಂಚಾಲಕರಾಗಿ ವಿನೋದ್ ಕ್ರಾಸ್ಟೊ ಕುಂದಾಪುರ, ಸ್ತ್ರೀ ಸಶಕ್ತೀಕರಣ ಸಂಚಾಲಕಿಯಾಗಿ ಶೈಲಾ ಡಿಆಲ್ಮೇಡಾ ಕುಂದಾಪುರ, ಲೆಕ್ಕ ತಪಸಣಿಗನಾಗಿ ಪ್ಯಾಟ್ರಿಕ್ ಮೆಂಡೊನ್ಸಾ ತಲ್ಲೂರು ಇವರುಗಳು ಆಯ್ಕೆಗೊಂಡರು.

ಚುನಾವಣ ಪ್ರಕ್ರಿಯೆಯನ್ನು ಕೇಂದ್ರಿಯ ಸಮಿತಿಯ ಮೇರಿ ಡಿಸೋಜಾ ಮಾತು ಮ್ಯಾಕ್ಷಿಮ್ ಡಿಸೋಜಾ ನೆಡೆಸಿಕೊಟ್ಟರು. ಅಧ್ಯಾತ್ಮಿಕ ನಿರ್ದೇಶಕರಾದ ವಲಯ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜಾ ಆರಿಸಿ ಬಂದವರನ್ನು ‘ಸಮಾಜಕ್ಕೆ ಒಳಿತಾಗುವ ಒಳ್ಳೆಯ ಕೆಲಸಗಳನ್ನು ಮಾಡ ಬೇಕೆಂದು ಕರೆ ಕೊಟ್ಟು’ ಶುಭ ಹಾರೈಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here