ಮಂಗಳೂರು ಎ. 20 : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರೂ, ಕರ್ನಾಟಕ ಸರಕಾರದ ರಾಜ್ಯ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷರಾದ ಜೆ.ಆರ್ ಲೋಬೊ ಅವರು ಮತ್ತೆ ಕಾಂಗ್ರೇಸ್ (ಐ) ಪಕ್ಷದ ಅಧಿಕೃತ ಅಭ್ಯಥಿಯಾಗಿ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವರು. ಜನಪ್ರಿಯ ಶಾಸಕರಾದ ಜೆ.ಆರ್ ಲೋಬೊ ಅವರು ಇಂದಿಲ್ಲಿ ಡಿ ಕಾಂಗ್ರೆಸ್ ಹಿರಿಯ ನಾಯಕರೂ, ಮಾಜಿ ಕೇಂದ್ರ ಸಚಿವರಾದ ಬಿ.ಜನಾರ್ಧನ ಪೂಜಾರಿ ಅವರ ಮಂಗಳೂರುನ ಮನೆಗೆ ಭೇಟಿ ಆಶೀರ್ವಾದ ಪಡೆದರು.