Wednesday 14th, May 2025
canara news

ಪ್ರಕಾಶ್ ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹುಚ್ಚ ವೆಂಕಟ್

Published On : 07 May 2018   |  Reported By : canaranews network


ಮಂಗಳೂರು: ಹುಚ್ಚಾ ವೆಂಕಟ್ ಪ್ರಧಾನಿ ಮೋದಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಕಾಶ ರೈ ನೀಡಿರುವ ಹೇಳಿಕೆಗಳಿಗೆ ಕೆಂಡಾಮಂಡಲರಾಗಿರುವ ಹುಚ್ಚ ವೆಂಕಟ್, ಪ್ರಕಾಶ್ ರೈ ವಿರುದ್ಧ ಕಿಡಿಕಾರಿದ್ದಾರೆ.ಮಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕಾಶ್ ರೈ ವಿರುದ್ಧ ವಾಗ್ದಾಳಿ ನಡೆಸಿದರು.

"ಪ್ರಕಾಶ್ ರೈ ಸಿನಿಮಾದಲ್ಲಿ ಬಹಳ ಡೈಲಾಗ್ ಹೊಡಿಯುತ್ತಾನೆ. ಸಮಾಜಕ್ಕೆ ಏನು ಸಹಾಯ ಮಾಡಿದ್ದಿಯಾ? ಎಷ್ಟು ಹಣ ಕೊಟ್ಟಿದ್ದಿಯಾ?," ಎಂದು ಅವರು ಕಿಡಿಕಾರಿದರು.ಪ್ರಕಾಶ್ ರೈ ಅವರನ್ನು ಪ್ರತಿಕಾಗೋಷ್ಠಿಯುದ್ದಕ್ಕೂ ಏಕ ವಚನದಲ್ಲೇ ಸಂಬೋಧಿಸಿದ ಹುಚ್ಚ ವೆಂಕಟ್ , "ನೀನು ನೀಡೋದು ದರಿದ್ರ ಸ್ಟೇಟ್ ಮೆಂಟ್. ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಿನಗಿಲ್ಲ. ನಿನ್ನ ಮಾತಿನಿಂದ ಮೋದಿ ಅವರಿಗೆ ಏನು ಆಗಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here