ಮುಂಬಯಿ, ಮೇ.19: ಉಪನಗರ ವಿೂರಾರೋಡ್ ಪೂರ್ವದ ಶಾಂತಿ ಪಾರ್ಕ್ ಅಲ್ಲಿನ ರೇಖಾ ರಿಟ್ರೀಟ್ ಸೊಸೈಟಿ ನಿವಾಸಿ ಕೆ.ಎನ್ ಪಾಂಡುರಂಗ (70.) ಕಳೆದ ಶುಕ್ರವಾರ (ಮೇ.18) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ವಿೂರಾರೋಡ್ ಕರ್ನಾಟಕ ಸಂಘ ಇದರ ಮಾಜಿ ಅಧ್ಯಕ್ಷ, ಭಗವತೀ ಹೊಬಳಿ ಮೋಗವೀರ ಮಹಾಜನ ಸೇವಾ ಸಂಘ ಇದರ ಮಾಜಿ ಕಾರ್ಯದರ್ಶಿ ಆಗಿ ಹಲವು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಉಡುಪಿ ಜಿಲ್ಲೆಯ ಕುಂದಾಪುರ ಆಗಿದ್ದ ಮೃತರು ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದಿಲ್ಲಿ ಸಂಜೆ ವಿೂರಾರೋಡ್ ಪೂರ್ವದಲ್ಲಿ ನೆರವೇರಿಸಲ್ಪಟ್ಟಿತು.