Wednesday 14th, May 2025
canara news

ವರುಣನ ಕೋಪದ ನಡುವೆಯೂ ಮಾನವೀಯತೆ ಮೆರೆದ ಕನ್ನಡಿಗ ಸಮಾಜ ಸೇವಕರು

Published On : 14 Jul 2018


ಮುಂಬಯಿ, ಜು.13: ಉಪನಗರ ನಲ್ಲಸೋಫರಾ ಪಶ್ಚಿಮದ ಹೋಟೆಲ್ ಉದ್ಯಮಿ, ಹೋಟೆಲ್ ಆರಾಮ್ ಇದರ ಮಾಲಿಕ ಅಶೋಕ್ ಸಾಲಿಯನ್ ಮತ್ತು ಬಳಗದ ತೆರೆಮರೆಯ ಸಮಾಜ ಸೇವಕರಾದಂಥ ಸುಧಾಕರ್ ಪೂಜಾರಿ (ಗಾರ್ನೀಶ್), ಸದಾಶಿವ ಎ.ಕರ್ಕೇರ, ಅರುಣ್ ಶೆಟ್ಟಿ, ಮತ್ತಿತರ ತುಳುಕನ್ನಡಿಗ ಮಿತ್ರರು ಅತೀವೃಷ್ಠಿ ಪೀಡಿತ ಪ್ರದೇಶದ ಜನರಿಗೆ ಉಪಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

ಮುಂಬಯಿ ಮಹಾನಗರದಲ್ಲಿ ಕಳೆದ ಮೂರು ದಿವಸಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಅನೇಕ ಜನರು ಪ್ರಯಾಣ, ಆಹಾರದ ತೊಂದರೆಗೆ ಸಿಲುಕಿದ್ದರು. ಅನೇಕರು ಹೊಟ್ಟೆಪಾಡಿಗಾಗಿ ಹಾತೊರೆಯುತ್ತಿದ್ದರು ಇದನ್ನು ಮನವರಿಸಿಕೊಂಡ ನಲ್ಲಸೋಫರಾ ಅಲ್ಲಿನ ಸಮಾಜ ಚಿಂತಕರು ಗೆಳೆಯರನ್ನು ಒಗ್ಗೂಡಿಸಿ ಧಾರಾಕಾರ ನೀರಿನ ನಡುವೆಯೂ ತಮ್ಮ ಜೀವದ ಹಂಗು ತೊರೆದು ಜನರಿಗೆ ಬೇಕಾದ ಉಪಹಾರ ದೋಸೆ, ವಡಾಪಾವ್, ಮಿಸಲ್ ಇತರೇ ತಿಂಡಿ ತಿನಿಸುಗಳು, ಚಾ-ಕಾಫಿ, ನೀರು ಒದಗಿಸುವ ಮೂಲಕ ಕಷ್ಟ ಕಾಲದಲ್ಲಿದ್ದ ಜನರಲ್ಲಿ ದಯೆ ತೋರಿ ದೇವರು ಮೆಚ್ಚುವಂಥ ಕೆಲಸಕ್ಕೆ ಪಾತ್ರರಾಗಿದ್ದಾರೆ. ಇಂತಹ ಸೇವೆ ಮಾದರಿ ಮತ್ತು ಇತರರಿಗೆ ಮಾರ್ಗದರ್ಶಕವಾಗಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here