ಜನಸಾಮಾನ್ಯರ ಉನ್ನತೀಕರಣ ಪಥಸಂಸ್ಥೆಗ ಧರ್ಮವಾಗಲಿ-ಶಾಸಕ ನಾರಾಯಣ ಗೌಡ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜು.22: ಆಥಿರ್üಕವಾಗಿ ಹಿನ್ನಡೆಯ ಶ್ರೀ ಸಾಮಾನ್ಯರ ಆಶಾ ಕಿರಣವಾಗಿ ಅನೇಕರಿಗೆ ಆಥಿರ್üಕ ಸೇವೆ ಒದಗಿಸಿ ಯುವಭ್ಯುದಯ ಉದ್ದೇಶ ನಮ್ಮ ಸೊಸೈಟಿ ನಿಭಾಯಿಸಿದ ವಿಶ್ವಾಸ ನಮಗಿದೆÉ. ಗ್ರಾಹಕರ ಮತ್ತು ಶೇರುದಾರದ ವಿಶ್ವಾಸ ಗಳಿಸಿ ಸೊಸೈಯನ್ನು ಮುನ್ನಡೆಸಿದ್ದು, ಸೊಸೈಟಿಯ ನಿವ್ವಳ ಲಾಭಕ್ಕಿಂತ ಗ್ರಾಹಕರ, ಜನಪರ ಲಾಭ ಎಷ್ಟು ಎನ್ನುವುದೇ ನಮ್ಮ ಉದ್ದೇಶವಾಗಿದೆ. ಪಥಸಂಸ್ಥೆಯು ವ್ಯವಹಾರ ದಕ್ಷತೆಗೆ ಮಹತ್ವವನ್ನೀಡುತ್ತಿದೆ. ಹಣಕಾಸು ಸಂಸ್ಥೆಗಳು ತಮ್ಮ ಸಹಭಾಗಿತ್ವದಿಂದ ಯುವ ಜನಾಂಗದೊಡನೆ ಉದಾರತೆ ತೋರಬೇಕು. ಇಂತಹ ಉಚ್ಚ ಸೇವಾಧರ್ಮ ಶ್ರೇಷ್ಠ ಸಹಕಾರಿ ಸಕಾರಾತ್ಮಕ ಸ್ಪಂದನೆ ಅಗತ್ಯ ಎನ್ನುವುದು ನಮ್ಮ ಅಭಿಮತವಾಗಿದೆ. ಪ್ರಸಕ್ತ ವರ್ಷದಲ್ಲಿ ನಿರ್ದೇಶಕ ಮಂಡಳಿಯ ದಕ್ಷ ನೇತೃತ್ವದಲ್ಲಿ ಮತ್ತು ನೌಕರವೃಂದ ಸಹಯೋಗದೊಂದಿಗೆ ನಮ್ಮ ಸೊಸೈಟಿ ಪ್ರಗತಿಯತ್ತ ಹೆಜ್ಜೆಗಳನ್ನಿರಿಸಿದೆ ಎಂದÀು ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಕಾರ್ಯಧ್ಯಕ್ಷ ರಂಗಪ್ಪ ಸಿ.ಗೌಡ ಎಂದರು.
ಮಹಾನಗರದಲ್ಲಿ ಸೇವಾ ನಿರತ ಜಯಲಕ್ಷ್ಮೀ ಪಥಸಂಸ್ಥೆಯ18ನೇ ವಾರ್ಷಿಕ ಮಹಾಸಭೆ ಇಂದಿಲ್ಲಿ ರವಿವಾರ ಅಂಧೇರಿ ಪೂರ್ವದ ಜೆ.ಬಿ ನಗರದಲ್ಲಿನ ಸತ್ಯನಾರಾಯಣ ಗೋಯೆಂಕಾ ಭವನÀದÀಲ್ಲಿ ಜರುಗಿದ್ದು, ಕರ್ನಾಟಕ ಮಂಡ್ಯದ ಕೆ.ಆರ್ ಪೇಟೆ ಶಾಸಕ, ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕಾಧ್ಯಕ್ಷ, ಜಯಲಕ್ಷ್ಮೀ ಕ್ರೆಡಿಟ್ ಸೊಸೈಟಿಯ ಸ್ಥಾಪಕ ನಿರ್ದೇಶಕ ಡಾ| ನಾರಾಯಣ ಆರ್.ಗೌಡ ಅವರು ಸೊಸೈಟಿಯ ನಿರ್ದೇಶಕರನ್ನೊಳಗೊಂಡು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯನ್ನಿತ್ತರು.
ಮಲ್ಲಿಕಾರ್ಜುನ ಸ್ವಾಮೀಜಿ ಕಾಂಜೂರ್ಮಾರ್ಗ್ ಅವರು ಒಕ್ಕಲಿಗರ ಧೀಶಕ್ತಿ ದೈವೈಕ್ಯ ಮಹಾಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಧನಲಕ್ಷ್ಮೀ ಮಾತೆಗೆ ಪೂಜೆ ನೆರವೇರಿಸಿದರು. ಮಹಿಳಾ ನಿರ್ದೇಶಕಿಯರು ಮಾತೆ ಜಯಲಕ್ಷ್ಮೀಗೆ ಆರತಿ ಬೆಳಗಿಸಿ ಸಭೆಗೆ ಸಾಂಕೇತಿಕವಾಗಿ ಚಾಲನೆಯನ್ನಿತ್ತರು. ರಂಗಪ್ಪ ಗೌಡ ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಶೇರುದಾರರಿಗೆ ಲಾಭಾಂಶದ 9%ನ್ನು ಭಾಜ್ಯಂಶ (ಡಿವಿಡೆಂಡ್) ಘೋಷಿಸಿದರು.
ನಾರಾಯಣ ಗೌಡ ಮಾತನಾಡಿ ಮಹಾಶಿವರಾತ್ರಿಯ ಶುಭಾವಸರದಿ ಶ್ರೀ ಮಹಾಲಕ್ಷಿ ್ಮೀ ಆಶೀರ್ವಾದದಿಂದ ಚಾಲನೆ ನೀಡಿಲ್ಪಟ್ಟ ಈ ಸೊಸೈಟಿ ಸದ್ಯ ಎಲ್ಲರ ಪಾಲಿನ ಆಶಾದಾಯಕವಾಗಿದೆ. ಇದು ನಿಮ್ಮೆಲ್ಲರ ಸಹಯೋಗದಿಂದ ಶ್ರೇಯಸ್ಸು ಪಡೆಯಲು ಸಾಧ್ಯವಾಗಿದಿದೆ. ಉದರ ಪೆÇೀಷಣೆಗಾಗಿ ಕರ್ಮಭೂಮಿಗೆ ಬಂದ ನಮ್ಮವರಿಗೆ ಮುಂಬಾದೇವಿ, ಜಯಲಕ್ಷಿ ್ಮೀ ಕರುಣಿಸಿದ್ದಾಳೆ ಇದು ನಾವು ಗರ್ವಪಡುಂತಾಗಬೇಕು. ಮುಂದಿನ ಕಾಲಾವಧಿ ಒಳಗೆ ಈ ಸೊಸೈಟಿಯಲ್ಲಿ 100 ಕೋಟಿ ಠೇವಣಿಯಾಗಿಸುವ ಕನಸು ನನಸಾಗಿಸುವ ಪ್ರಯತ್ನ ಮಾಡುವೆ. ಜನಸಾಮಾನ್ಯರ ಉನ್ನತೀಕರಣದಿಂದ ಪಥಸಂಸ್ಥೆಗಳ ಸಾರ್ಥಕತೆ. ವೈಚಾರಿಕ ಪ್ರಗತಿಯ ಜೊತೆಗೆ ಸಮಾಜೋನ್ನತಿಯ ಕೆಲಸವನ್ನು ತಮ್ಮ ಕಾಯಕ ಎನ್ನುವಂತೆ ಸಂಸ್ಥೆಗಳು ರೂಢಿಸಿ ಕೊಂಡರೆ ಒಟ್ಟು ರಾಷ್ಟ್ರದ ಬಡತನ ನಿವಾರಣೆಯೂ ಸಾಧ್ಯವಾಗ ಬಲ್ಲದು ನಾನೂ ಅಷ್ಟೇ ಎಂದಿಗೂ ಗಳಿಸುವ ಉದ್ದೇಶ ಇರಿಸದೆ ಕೊಡುವುದನ್ನು ಧರ್ಮವಾಗಿಸಿದ ಕಾರಣ ಎರಡನೇ ಬಾರಿ ಶಾಸಕನಾಗಲು ಸಾಧ್ಯವಾಗಿದೆ ಎಂದರು.
ಷೇರುದಾರರು ಮೂರು ವರ್ಷದೊಳಗೆ ತಮ್ಮ ಡಿವಿಡೆಂಡ್ ಮೊತ್ತವನ್ನು ತಮ್ಮ ಖಾತೆಗೆ ಜಮಾಯಿಸ ತಕ್ಕದ್ದು. ಇಲ್ಲವಾದಲ್ಲಿ ಸರÀಕಾರದ ಪಾಲಾಗುತ್ತದೆ. ಒವರ್ ಡ್ರಾಫ್ಟ್ ಮೊತ್ತವೂ (ಓಡಿ) ಸಮಯೋಚಿತವಾಗಿ ಭರಿಸತಕ್ಕದ್ದು. ಇಲ್ಲವಾದಲ್ಲಿ ಎನ್ಪಿಎ ಹೆಚ್ಚಾಗುತ್ತದೆ. ಸೊಸೈಟಿ ರಿಜಿಸ್ತ್ರಾರ್ ಇದೀಗಲೇ ನಮ್ಮ ಸೊಸೈಟಿಗೆ ರಾಯಗಾಢ ಮತ್ತು ಪಾಲ್ಘರ್ ಜಿಲ್ಲೆಗಳಲ್ಲೂ ಶಾಖೆ ತೆರೆಯಲು ಪರವಾನಿಗೆ ಪ್ರಾಪ್ತಿಸಿದೆ ಎಂದು ಕಾರ್ಯದರ್ಶಿ ಕೆ.ರಾಜೇ ಗೌಡ ತಿಳಿಸಿದರು.
ಮುಖ್ಯ ಅತಿಥಿüಯಾಗಿ ಸರಕಾರಿ ಅಧಿಕಾರಿ ರಂಗನಾಥ್ ಥಾವ್ಳೆ, ಅಭ್ಯಾಗತರುಗಳಾಗಿ ಕಾಂಗ್ರೇಸ್ ನೇತಾರ ಚಂದ್ರ ಶೆಟ್ಟಿ, ರವೀಂದ್ರ ಎನ್.ಗೌಡ, ಸಿಎ| ಮಂಜುನಾಥ ಕೆ.ಗೌಡ ಸಂದರ್ಭೋಚಿತವಾಗಿ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸೊಸೈಟಿಯ ಯಶಸ್ಸಿಗೆ ಶುಭಕೋರಿದರು. ಕೆ.ಆರ್ ಪೇಟೆ ಶಾಸಕರಾಗಿ ದ್ವಿತೀಯ ಬಾರಿಗೆ ಆಯ್ಕೆಯಾದ ಸೊಸೈಟಿಯ ಸ್ಥಾಪಕ ನಿರ್ದೇಶಕ ಡಾ| ನಾರಾಯಣ ಆರ್.ಗೌಡ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಒಕ್ಕಲಿಗರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಜಿತೇಂದ್ರ ಜೆ.ಗೌಡ, ಉದ್ಯಮಿಗಳಾದ ಸದಾನಂದ ಗಾಯಕ್ವಾಡ್, ಪುರುಷೋತ್ತಮ ಗೌಡ,ನಾಗರಾಜ ಗೌಡ, ರಮೇಶ್ ಗೌಡ, ಕರಿಯಪ್ಪ ಗೌಡ, ಪುಟ್ಟಪ್ಪ ಗೌಡ ಹಾಗೂ ಸೊಸೈಟಿಯ ಉಪಾಧ್ಯಕ್ಷ ಎ.ಕೆಂಪೇ ಗೌಡ (ರಾಮಣ್ಣ), ಕಾರ್ಯದರ್ಶಿ ಕೆ.ರಾಜೇ ಗೌಡ, ನಿರ್ದೇಶಕರಾದ ಮುತ್ತೇ ಎಸ್.ಗೌಡ, ಅನುಸೂಯ ಆರ್.ಗೌಡ, ದೇವಕಿ ನಾರಾಯಣ ಗೌಡ, ಸುನಂದ ಆರ್.ಗೌಡ, ರಾಹುಲ್ ಯು.ಲಗಡೆ, ಭಾರತಿ ಎಸ್.ಗಾಯ ಕ್ವಾಡ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಸೊಸೈಟಿಯ ಪ್ರಬಂಧಕ ಪರ್ಶುರಾಮ್ ಕೆ.ದೌಂಡ್ ಸ್ವಾಗತಿಸಿ ಸಭಾ ಕಲಾಪ ನಡೆಸಿ ಸೊಸೈಟಿ ಗತ ಕ್ಯಾಲೆಂಡರ್ ವರ್ಷದಲ್ಲಿ 4,726 ಸದಸ್ಯರನ್ನೊಳಗೊಂಡಿದೆ. 2.77 ಕೋಟಿ ರೂಪಾಯಿ ಶೇರ್ ಕ್ಯಾಪಿಟಲ್, 2.82 ಕೋಟಿ ರಿಝರ್ವ್ ಫಂಡ್, 33.56 ಕೋಟಿ ಠೇವಣಾತಿ ಹೊಂದಿದ್ದು 41.64 ಕೋಟಿ ಕಾರ್ಯಮಾನ ಬಂಡವಾಳ ವ್ಯವಹರಿಸಿದೆ ಎಂದರು. ಹಾಗೂ ಗತ ಸಾಲಿನ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ ಸೊಸೈಟಿಯು ಈ ಬಾರಿಯೂ ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ `ಎ' ದರ್ಜೆ ಸ್ಥಾನದೊಂದಿಗೆ ಧೃಡೀಕೃತಗೊಂಡಿದೆ ಎಂದರು.
ಕಾರ್ಯಾಧ್ಯಕ್ಷರು ಸದಸ್ಯರ ಮಕ್ಕಳಿಗೆ ಪಠ್ಯಪುಸ್ತಕ, ವಿದ್ಯಾಥಿರ್ü ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿ ವಿತರಿಸಿದರು. ಹಾಗೂ ಸೊಸೈಟಿಯ ಉನ್ನತಿಗಾಗಿ ಶ್ರಮಿಸಿದ ಸರ್ವರ ಅನನ್ಯ ಸೇವೆ ಶ್ಲಾಘಿಸಿ ಅಭಿವಂದಿಸಿದರು. ಸೊಸೈಟಿಯ ಗ್ರಾಹಕರು, ಹಿಶೆದಾರರು, ಹಿತೈಷಿಗಳು, ಸೊಸೈಟಿಯ ಕರ್ಮಚಾರಿಗಳು, ಪಿಗ್ಮೀ ಸಂಗ್ರಹದಾರರು, ಸಭೆಯಲ್ಲಿ ಹಾಜರಿದ್ದರು. ಮಾ| ನಿಖಿಲ್ ರವಿಕುಮಾರ್ ಗೌಡ, ಕು| ಭೂಮಿಕಾ ಜೆ.ಗೌಡ, ಮಾ| ಪ್ರಜ್ವಲ್ ಜಿ.ಗೌಡ ಹಾಗೂ ಕು| ಸುರಕ್ಷಾ ಆರ್.ಗೌಡ ಅವರ ಗಣೇಶ ವಂದನೆಯೊಂದಿಗೆ ಸಭೆ ಆದಿಗೊಂಡಿತು.
ಕಚೇರಿ ಅಧಿಕಾರಿಗಳಾದ ಆಶಾರಾಣಿ ಬಿ.ಗೌಡ ಗತವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ಪ್ರಕಾಶ್ ಎನ್.ವಾಡ್ಕರ್ ಅಂತರಿಕ ಲೆಕ್ಕಪತ್ರಗಳ ಮಾಹಿತಿ ಮತ್ತು ರವಿ ಸುಭಾಷ್ ಗೌಡ ವಾರ್ಷಿಕ ವ್ಯವಹಾರದ ಮಾಹಿತಿ ನೀಡಿದರು. ಪ್ರದೀಪ್ಕುಮಾರ್ ಆರ್.ಗೌಡ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಭಿತ್ತರಿಸಿದರು. ಲೆಕ್ಕಾಧಿಕಾರಿ ಶಿಲ್ಪಾ ಸಂತೋಷ್ ಮಾಂಡವ್ಕಾರ್ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು. ಶಿವಕುಮಾರ್ ಹೆಚ್.ಗೌಡ ವಾರ್ಷಿಕ ಬಜೆಟ್ ಮಂಡಿಸಿದರು. ಕೆ.ರಾಜೇ ಗೌಡ ಅತಿಥಿüಗಳನ್ನು ಪರಿಚಯಿಸಿ ಧನ್ಯವದಿಸಿದರು.