Wednesday 14th, May 2025
canara news

ಮೈಸೂರು ಅಸೋಸಿಯೇಶನಲ್ಲಿ `ರಂಗಭೂಮಿಯಿಂದ ಸಮಾಜ ಸುಧಾರಣೆ' ವಿಚಾರ ಸಂಕಿರಣ

Published On : 18 Oct 2018   |  Reported By : Rons Bantwal


ಜೈಲಿನಲ್ಲಿ ಖೈದಿಗಳಿಗೆ ಶಿಕ್ಷೆ ಆಗಬಾರದು : ಎನ್.ಎಸ್ ಮೇಘರಿಖ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.18: ನ್ಯಾಯಾಲಯ ತೀರ್ಪು ಮೇರೆಗೆ ಶಿಕ್ಷೆ ಅನುಭವಿಸಲು ಜೈಲು ಸೇರಿದ ಬಂದಿಗಳಿಗೆ ಜೈಲು ಎಂಬುದು ಶಿಕ್ಷೆಯ ತಾಳಿವೆಂದು ಆಗಬಾರದು. ಅವರ ಪರಿವರ್ತನೆಯ ಶಿಕ್ಷೆಯ ಜಾಗವಾಗಬೇಕೆಂದು ನಮ್ಮ ಧ್ಯೇಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಡನೆ ಭಯದಿಂದ ವರ್ತಿಸದಂತೆ ಹಾಗೂ ಮಾನವ ಹಕ್ಕುಗಳ ಬಗ್ಗೆ ಸದಾ ಜಾಗೃತರಾಗಬೇಕಾಗಿದೆ. ಖೈದಿಗಳ ಜೊತೆ ಪೆÇೀಲಿಸು ಸಿಬ್ಬಂದಿಗಳು ಮಾನವೀಯ ನೆಲೆಯಲ್ಲಿ ವರ್ತಿಸಬೇಕಾಗಿದೆ. ಜೈಲಿನಲ್ಲಿ ಖೈದಿಗಳಿಗೆ ಶಿಕ್ಷೆಯಾಗಬಾರದು. ಅಪರಾಧವನ್ನು ಖಂಡಿಸಬೇಕು. ಅಪರಾಧಗಳನ್ನು ಅಲ್ಲ ಎಂದು ಹಿರಿಯ ಪೆÇೀಲಿಸ್ ಕರ್ನಾಟಕ ರಾಜ್ಯ ಎಡಿಜಿಪಿ ಎನ್.ಎಸ್ ಮೇಘರಿಖ್ (ಐಪಿಎಸ್) ಹೇಳಿದರು.

ನಾಡಹಬ್ಬದ ಪ್ರಯುಕ್ತ ಕಳೆದ ಭಾನುವಾರ ಸಂಜೆ ಮಾಟುಂಗಾ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ನಡೆಸಲ್ಪಟ್ಟ `ರಂಗಭೂಮಿಯಿಂದ ಸಮಾಜ ಸುಧಾರಣೆ' ವಿಚಾರಿತ ಸಂಕಿರಣ ಉದ್ದೇಶಿಸಿ ಮೇಘರಿಖ್ ಮಾತನಾಡಿದರು.

ನಾಗ್ಪುರ ಜಿಲ್ಲಾ ಐಜಿಪಿ ಕೆ.ಎಂ.ಎಂ ಪ್ರಸನ್ನ (ಐಪಿಎಸ್), ನಿವೃತ್ತ ಇನ್ಸ್‍ಪೆಕ್ಟರ್ ಜನರಲ್ ಆಫ್ ಪೆÇಲೀಸ್ ಗೋಪಾಲ್ ಹೊಸೂರು, ಕರ್ನಾಟಕ ನಾಟಕ ಆಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ, ಮೈಸೂರು ಅಸೋಸಿಯೇಶನ್‍ನ ಅಧ್ಯಕ್ಷೆ ಕಮಲಾ ಕಾಂತರಾಜ್ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

ಕೆ.ಎಂ.ಎಂ ಪ್ರಸನ್ನ ಮಾತನಾಡಿ ನಾಗರಿಕತೆ ಪ್ರಾರಂಭವಾದುದರಿಂದ ಅಪರಾಧ ಶುರುವಾಗಿದೆ. ನಾಗರಿಕತೆ ಬೆಳೆದಂತೆ ಅಪರಾಧಿ ವಿಧಾನಗಳು ಅಂತೆಯೇ ಶಿಕ್ಷೆಯ ಕ್ರಮಗಳೂ ಬದಲಾವಣೆ ಗೊಂಡಿದೆ. ಅಪರಾಧಿಗಳು ವಿವೇಚನೆ ಇಲ್ಲದೆ ಎಸಗಿದ ಅಪರಾಧ ಎಂದು ತಿಳಿದುಕೊಂಡಾಗ ಜೈಲುಗಳು ಪರಿವರ್ತನೆಯ ಸ್ಥಳವಾಗಿ ಗುರುತಿಸಿಕೊಳ್ಳುತ್ತಿದೆ ಹಾಗೂ ರಂಗಭೂಮಿಯಿಂದ ಈ ಪ್ರಕ್ರಿಯೆ ಪ್ರಾರಂಭವಾದುದು ಒಳ್ಳೆಯದು ಎಂದರು.

ಖೈದಿಗಳ ಮೇಲಿರುವ ಒತ್ತಡವನ್ನು ಕಡಿಮೆ ಗೊಳಿಸುವ ಉದ್ದೇಶದಿಂದ ನಡೆಸಿರುವ ಇಂತಹ ಪ್ರಯೋಗ ಸ್ತುತ್ಯಾರ್ಹ. ಈ ಯೋಜನೆಯು ಹೆಚ್ಚು ಫಲಕಾರಿಯಾಗಿದೆ. ಬಹುಮುಖ ಚಟುವಟಿಕೆಗಳಲ್ಲಿ ಭಾಗಿಯಾದರೆ ಮಾನಸಿಕ ತೃಮುಲ ಕಡಿಮೆಯಾಗುತ್ತಾ ವ್ಯಕ್ತಿಯೇ ತನ್ನ ಸಮಸ್ಯೆಗಳಿಂದ ಹೊರ ಬರುತ್ತಾನೆ. ಕಟ್ಟಿಮನಿ ಅವರು ಮಾಡಿತ್ತಿರುವ ಈ ಅದ್ಭುತ ಕಾರ್ಯಕ್ಕೆ ನಮ್ಮಬೆಂಬಲವಿದೆ. ಜೈಲಿನಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆಯ ನಡುವೆ ಸಂಕಲ್ಪ ಯೋಜನೆಯ ಯಶಸ್ವಿಯಾಗಿತ್ತಿದೆ ಎಂದು ಗೋಪಾಲ ಹೊಸೂರು ತಿಳಿಸಿದರು.

ಕಪ್ಪಣ್ಣ ಮಾತನಾಡಿ ಕಾರಾಗೃಹದಲ್ಲಿರುವ ಬಂಧಿಗಳಿಗೆ ನಟನೆಯ, ತರಬೇತಿ ನೀಡಿ ಅವರನ್ನು ಪರಿವರ್ತನೆ ಗೊಳಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಅದ್ಭುತ ಚಳವಳಿಗೆಕರ್ನಾಟಕ ಸರಕಾರದ ಸಹಕಾರ ಅನುಪಮ. ಉತ್ತಮ ನಾಯಕರು ರಂಗಭೂಮಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ, ಉತ್ತಮ ಗುಣ ಮಟ್ಟವನ್ನು ಕಾಯ್ದಿರಿಸಿರುವ ಸಂಕಲ್ಪ ಎಂಬ ಯೋಜನೆಯ ಬಗ್ಗೆ ಸರಕಾರವು ಆಸಕ್ತಿ ವಹಿಸಿರುವುದು ಸಂತಸ ಸಂಗತಿ ಆಗಿದೆ ಹಾಗೂ ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವೇ ಪ್ರಥಮವಾದುದು ಎಂದರು.

ಕಾರ್ಯಕ್ರಮದ ಅಂಗವಾಗಿ ರಂಗ ತರಬೇತಿಯಿಂದ `ಸಮಾಜ ಸುಧಾರಣೆ' ದಾಖಲೆಚಿತ್ರ ಪ್ರದರ್ಶಿಸಲ್ಪಟ್ಟಿತು. ರಾತ್ರಿ ಹುಲುಗಪ್ಪ ಕಟ್ಟೀಮ ಪರಿಕಲ್ಪನೆ ಮತ್ತು ಪ್ರಧಾನ ನಿರ್ದೇಶನ ಹಾಗೂ ಪಿ.ಎಸ್ ರಾಘವೇಂದ್ರ ಹೆಗ್ಗೋಡು ನಿರ್ದೇಶನದಲ್ಲಿ ಮೈಸೂರು ಸೆರೆಮನೆಯಲ್ಲಿರುವ ಸೆರೆಯಾಳು ಕಲಾವಿದರು `ಸಂಗ್ಯಾ ಬಾಳ್ಯಾ' ಜಾನಪದ ನಾಟಕ ಪ್ರದರ್ಶಿಸಿದರು.

ಮೈಸೂರು ಅಸೋಸಿಯೇಶನ್‍ನ ಕೆ.ಮಂಜುನಾಥ್, ವ್ಯವಸ್ಥಾಪಕ ಬಿ.ಕೆ ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದು, ಡಾ| ಬಿ.ಆರ್ ಮಂಜುನಾಥ್ ಸ್ವಾಗತಿಸಿ ಪ್ರಸ್ತಾವನೆಗೈದರು. ಅಸೋಸಿಯೇಶನ್‍ನ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ ವಂದಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here