Wednesday 14th, May 2025
canara news

ತುರ್ತು ನಿಗಾ ವಿಭಾಗದಲ್ಲಿ ದಾಖಲಾಗಿರುವ ಸುಮನ ಅಶೋಕ್‍ಗೆ ಸಹೃದಯಿ ದಾನಿಗಳ ಆಥಿ೯ಕ ಸಹಾಯಕ್ಕೆ ವಿನಂತಿ

Published On : 05 Dec 2018   |  Reported By : Ronida Mumbai


ಮುಂಬಯಿ, ಡಿ.04: ಕುಂದಾಪುರ ತಾಲೂಕಿನ ಹಂಗ್ಲೂರು ನಿವಾಸಿ ಅಶೋಕರ ಪತ್ನಿ ಸುಮನ ಒಳರೋಗಿ ಸಂಖ್ಯೆ 3256114ರ ಪ್ರಕಾರ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ದಾಖಲಾಗಿರುತ್ತಾರೆ. ನ.19ರಂದು ತುರ್ತಾಗಿ ಸಿಸರಿನ್ ಶಸ್ತ್ರಚಿಕಿತ್ಸೆ ಗೊಳಗಾಗಿರುತ್ತಾರೆ. ನಂತರ ಮೂತ್ರಕೋಶದ ತೀವ್ರ ತೊಂದರೆಯಿಂದ ತುರ್ತು ನಿಗಾ ವಿಭಾಗಕ್ಕೆ ದಾಖಲಾಗಿ ನ.20ರಂದು ಲೆಪರೋಟಮ್ ಚಿಕಿತ್ಸೆಗೆ ಒಳಗಾಗಿರುತ್ತಾರೆ. ಮೂತ್ರಕೋಶದ ತೀವ್ರ ಅಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನಕ್ಕೆ ಕೆಲವು ಸಲ ಡಯಾಲಿಸಿಸ್‍ಗೆ ಒಳಗಾಗಬೇಕಾಗಿದೆ.

ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯಲು ಸುಮಾರು ಆರು ಲಕ್ಷಕ್ಕಿಂತಲೂ ಹೆಚ್ಚಿನ ಖರ್ಚು ತಗಲುತ್ತದೆ ಎಂಬುದಾಗಿ ತಜ್ಞ ವೈದ್ಯರು ಅಂದಾಜು ಮಾಡಿ ತಿಳಿಸಿರುತ್ತಾರೆ. ದರ್ಜಿಯಾಗಿರುವ ಪತಿ ಅಶೋಕ ಆದಾಯ ತೀರಾ ಕಡಿಮೆಯಿದ್ದು ಇವರು ಆಥಿರ್üಕವಾಗಿ ಹಿಂದುಳಿದಿದ್ದಾರೆ. ಇಬ್ಬರು ಮಕ್ಕಳ ತಂದೆತಾಯಿ ಆಗಿರುವ ಇವರು ಕಷ್ಟದಿಂದ ಜೀವನ ಸಾಗಿಸುತ್ತಿದ್ದರು. ಭವಾನಿಯ ಅಸೌಖ್ಯತೆಯಿಂದ ದಾನಿಗಳಿಂದ ಆಥಿರ್üಕ ಸಹಾಯ ಯಾಚಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಆಥಿರ್üಕ ಸಹಾಯ ನೀಡಿ ಸಹಕರಿಸುವಂತೆ ವಿನಂತಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಡೆಯರ ಹೋಬಳಿ ಇಲ್ಲಿನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 4339108000292 IಈSಅ ಅoಜe ಅಓಖಃ0004339, ಒIಅಖ ಅoಜe 576015203 ಆಗಿದೆ. ಕೊಡುಗೈದಾನಿಗಳು ಈ ಖಾತೆಗೆ ತಮ್ಮ ಸಹಾಯಧನವನ್ನು ನೀಡಿ ಸಹಕರಿಸುವಂತೆ ಅಶೋಕ್ ಮನವಿ ಮಾಡಿಕೊಂಡಿರುತ್ತಾರೆ. ದೂರವಾಣಿ ಸಂಖ್ಯೆ 9591471213 (ಅಶೋಕ್). * ರೋನಿಡಾ ಮುಂಬಯಿ

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here