Friday 19th, April 2024
canara news

ಇಂಟರ್‍ನೇಶನಲ್ ಫೀಸ್ ಯೂನಿವರ್ಸಿಟಿ ಜರ್ಮನ್ ಸಂಸ್ಥೆಯ `ಗೌರವ ಡಾಕ್ಟರೇಟ್'ಗೆ ಪಾತ್ರರಾದ ಕರ್ನೂರು ಮೋಹನ್ ರೈ

Published On : 08 Dec 2018   |  Reported By : Rons Bantwal


ಮುಂಬಯಿ, ಡಿ.07: ಸುಮಾರು ಮೂರು ದಶಕಗಳ ಕಲಾ ಸೇವೆ, ಕಲಾ ಸಂಘಟನೆಗಳಿಂದ `ಕರ್ನೂರು' ಎಂದೇ ಪ್ರಸಿದ್ಧÀರಾದ ಕರ್ನೂರು ಮೋಹನ್ ರೈ ಇವರಿಗೆ ಜರ್ಮನಿ ರಾಷ್ಟ್ರದ ಇಂಟರ್‍ನೇಶನಲ್ ಫೀಸ್ ಯೂನಿವರ್ಸಿಟಿ ಸಂಸ್ಥೆಯು `ಗೌರವ ಡಾಕ್ಟರೇಟ್' ಪ್ರದಾನಿಸಿ ಗೌರವಿಸಿದೆ.

ಇತ್ತೀಚೆಗೆ ದುಬೈ ಗ್ರಾಂಡ್ ಎಕ್ಸೆಲೈರ್ನ್ ಹೊಟೇಲು ಸಭಾಗೃಹದಲ್ಲಿ ನಡೆದ ಪದÀವಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತ ಗ್ಲೋಬಲ್ ಎಕ್ರೇಡಿಯೇಶನ್ ಕೌನ್ಸಿಲ್ ಜರ್ಮನಿ ನಿರ್ದೇಶಕ ಡಾ| ಕ್ರಿಸ್ತಿಯನ್ ಬ್ರಿಲ್ಲಿಂಗರ್, ಮಿಡ್ಲ್‍ಈಸ್ಟ್ ಲಂಡನ್‍ನ ಡಾ| ವಿಲ್ಲಿಯಂ ಬಾಸ್ಲಿಂಗ್, ಡಾ| ಗ್ಯಾರಿ ಡಿ.ಲಾ ಪೆÇಮೆರ ಫಿನ್‍ಲ್ಯಾಂಡ್, ಡಾ| ಮಿಕ್ಕೊ ಕ್ಯಾಸ್ಟಿಕೋ, ಭಾರತರ ಮಾಜಿ ಸಿ.ಬಿ.ಐ ಡೈರೆಕ್ಟರ್ ಡಾ| ವಿ.ಎನ್ ಸೈಗಲ್ ಸೇರಿದಂತೆ ಹ¯ವಾರು ಗಣ್ಯರು ಸೇರಿ ಗೌರವ ಡಾಕ್ಟರೇಟ್ ಪ್ರದಾನಿಸಿ ಶುಭಾರೈಸಿದರು.

ಕರ್ನೂರು ಮೋಹನ್ ರೈ ಅವರು ದೇಶ ವಿದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿ ತುಳು, ಕನ್ನಡ ಕಲಾವಿದರಿಗೆ ಆಶ್ರಯವಿತ್ತಿದ್ದಾರೆ. ಮಂಗಳೂರುನ ತುಳು ನಾಟಕ ಚಲನಚಿತ್ರ ಮತ್ತು ಯಕ್ಷಗಾನ ಕಲೆಯನ್ನು ಮುಂಬಯಿ, ಕೊಲ್ಲಿ ರಾಷ್ಟ್ರಗಳಲ್ಲಿ ಸಂಘಟಿಸಿ ಪೆÇ್ರೀತ್ಸಾಹಿಸಿದ್ದಾರೆ. ಮುಂಬಯಿನಲ್ಲಿ ತಮ್ಮ ವೃತ್ತಿಜೀವನದೊಂದಿಗೆ ಕಲಾರಾಧನೆಯನ್ನು ನಡೆಸಿ ಕೂಂಡು ಬರುತ್ತಿರುವ ಕರ್ನೂರು ಸೇವೆಯನ್ನು ಪರಿಗಣಿಸಿ ಮುಂಬಯಿಯಲ್ಲಿ ರೈ ಅವರ ಅಭಿಮಾನಿಗಳು ಇವರ ಕಲಾಸೇವೆಯ 25ನೇ ವರ್ಷವನ್ನು `ರಂಗ ಮೋಹನ 25' ಎಂಬ ಅಭೂತಪೂರ್ವ ಕಾರ್ಯಕ್ರಮ ಮೂಲಕ ಗೌರವಿಸಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here