ಮುಂಬಯಿ, ಡಿ.15: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಇದೇ ಡಿ.20 ರಿಂದ ಡಿ.24 ತನಕ ಮುಂಬಯಿಮಹಾನಗರದ ಚೆಂಬೂರು ಪಶ್ಚಿಮದಲ್ಲಿನ ಛೆಡ್ಡಾನಗರದ ಶ್ರೀ ಸುಬ್ರಹ್ಮಣ್ಯ ಮಠದ ಶಾಖೆಯಲ್ಲಿ ಮೊಕ್ಕಂ ಹೂಡಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿದ್ದಾದೆ.
ಶ್ರೀಪಾದರು ಡಿ.218ಕ್ಕೆ ಹೊರತು ಭಕ್ತಾಭಿಮಾನಿಗಳು ಮಠಕ್ಕೆ ಆಗಮಿಸಿ ಶ್ರೀಗಳನ್ನು ಭೇಟಿಯಾಗಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಸಂಪುಟ ಮತ್ತು ನಾಗದೇವರ ಅನುಗ್ರಹ ಪಡೆಯುವಂತೆ ಹಾಗೂ ಶ್ರೀಗಳ ಹಸ್ತದಿಂದಲೇ ಮಂತ್ರಾಕ್ಷತೆ, ಆಶೀರ್ವಚನ ಪಡೆಯುವಂತೆ ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ-25258774 ಯಾ 25255039 ಇವುಗಳನ್ನು ಸಂಪರ್ಕಿಸುವಂತೆ ಮಠಾಧಿಕಾರಿಗಳು ಕೋರಿದ್ದಾರೆ.