Thursday 28th, March 2024
canara news

ಬೃಹನ್ಮುಂಬಯಿನಲ್ಲಿ ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹದ ಸಮಾರೋಪ

Published On : 02 Jul 2019   |  Reported By : Rons Bantwal


ದೇವರ ಸೇವೆಗೆ ಪಡುವ ಕಷ್ಟ ಅದು ತಪಸ್ಸು ಇದ್ದಂತೆ: ವಿಶ್ವೇಶತೀರ್ಥಶ್ರೀ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜೂ.30: ಉಡುಪಿ ಶ್ರೀಕೃಷ್ಣನಿಗೆ ಸಪೆÇ್ತೀತ್ಸವ ನಡೆಯುವಂತೆ ಮುಂಬಯಿ ಮಹಾನಗರಿಯಲ್ಲಿ ಆತನಿಗೆ ತುಲಾಭಾರ ಸಪ್ತಾಹೋತ್ಸವ ನಡೆದಿದೆ. ಇಲ್ಲಿ ನಮಗೆ ಯಾವ ತೊಂದರೆಗಳೂ ಆಗಲಿಲ್ಲ. ದೇವರ ಸೇವೆಗೆ ಪಡುವ ಕಷ್ಟ ಅದು ತಪಸ್ಸು ಇದ್ದ ಹಾಗೆ. ಅದು ಶ್ರೀ ಕೃಷ್ಣನ ಸೇವೆಗೆ ಆತ ನೀಡಿದ ಅವಕಾಶ. ಕಾಳಿಯನಿಂದಾಗಿ ಯಮುನಾ ನದಿಯಲ್ಲಿ ತುಂಬಿದ ವಿಷವನ್ನು ಶ್ರೀ ಕೃಷ್ಣ ಕಾಳಿಯ ಮರ್ದನನಾಗಿ ಹೇಗೆ ಶುದ್ದಿಗೊಳಿಸಿದನೋ, ಅಂತೆಯೇ ಇಂದು ಪರಿಸರದಲ್ಲಿ ಯಂತ್ರ, ತಂತ್ರಗಳಿಂದ ಕಲುಷಿತವಾದ ವಾತಾವರಣವನ್ನು ಹಾಗೂ ನಮ್ಮ ಅಂತರಂಗ-ಬಹಿರಂಗದಲ್ಲಿ ತುಂಬಿಕೊಂಡ ಕೆಟ್ಟ ಕಾಮನೆಗಳನ್ನು, ಮಂತ್ರದಿಂದ ಶುದ್ದಿಗೊಳಿಸಬೇಕು. ಅದಕ್ಕೆ ಮಂದಿರಗಳ ನಿರ್ಮಾಣ ಅತ್ಯಂತ ಅವಶ್ಯ. ಗೋಕುಲದ ಶ್ರೀ ಕೃಷ್ಣ ಮಂದಿರ ನಿರ್ಮಾಣಕ್ಕೆ ಸರ್ವ ಭಕ್ತಾದಿಗಳು ತುಂಬು ಹೃದಯದಿಂದ ಸಹಕರಿಸಬೇಕು ಎಂದು ಜಗದ್ಗುರು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಜಿಪಿಟಿ), ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ ಹಾಗೂ ಶ್ರೀ ಕೃಷ್ಣ ಭಕ್ತಾದಿಗಳು ಮತ್ತು ಶ್ರೀ ಪೇಜಾವರ ಮಠಾಧೀಶರ ಅಭಿಮಾನಿಗಳು ಪ್ರಪ್ರಥಮ ಬಾರಿಗೆ ಮುಂಬಯಿ ಹಾಗೂ ಉಪನಗರಗಳ ಭಕ್ತವೃಂದವು ಬೃಹನ್ಮುಂಬಯಿನಲ್ಲಿ ಹಮ್ಮಿಕೊಂಡಿದ್ದ ಪೇಜಾವರಶ್ರೀಗಳ ರಜತ ತುಲಾಭಾರ ಸಪ್ತಾಹ ಸಮಾರೋಪ ಉದ್ದೇಶಿಸಿ ಪೇಜಾವರಶ್ರೀ ನುಡಿದರು.

ಇಂದಿಲ್ಲಿ ಆದಿತ್ಯವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠದಲ್ಲಿ ಶ್ರೀ ಕ್ಷೇತ್ರ ಕಟೀಲು ಇದರ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ ಇವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿದ ತುಲಾಭಾರ ಸಪ್ತಾಹದ ಸಮಾರೋಪದಲ್ಲಿ ಸಮಾರಂಭದಲ್ಲಿ ಬೃಹನ್ಮುಂಬಯಿ ಮುನ್ಸಿಪಾಲ್ ಕಾಪೆರ್Çೀರೇಶನ್ (ಬಿಎಂಸಿ) ಮಹಾಪೌರ ಪೆÇ್ರ| ವಿಶ್ವನಾಥ್ ಮಹಾದೇಶ್ವರ್ ಮುಖ್ಯ ಅತಿಥಿsಯಾಗಿದ್ದು, ಪೇಜಾವರ ಸ್ವಾಮೀಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಡಾ| ಸುರೇಶ್ ಎಸ್.ರಾವ್ ಮಾತನಾಡಿ ನಾವು ಹಮ್ಮಿಕೊಂಡ ರಜತ ತುಲಾಭಾರ ಸೇವೆಯು ಶ್ರೀ ಗುರುಗಳ ಹಾಗೂ ಶ್ರೀ ಕೃಷ್ಣನ ಅನುಗ್ರಹದಿಂದ ಅತ್ಯುತ್ತಮವಾಗಿ ಜರಗಿ ಇತಿಹಾಸವನ್ನು ನಿರ್ಮಿಸಿದ ತೃಪ್ತಿ ತಂದಿದೆ. ಆದರೆ ಒಂದೆರಡು ದಿನ ಮಳೆಯ ಕಾರಣ ಶ್ರೀಗಳಿಗೆ ಪ್ರಯಾಣದಲ್ಲಿ ತುಂಬಾ ತೊಂದರೆಯಾದುದು ನಮಗೆ ಬೇಸರವಾಗಿದೆ. ಅವರಿಗೆ ಆದ ಕಷ್ಟಗಳಿಗೆ ನಮಗೆ ತುಂಬಾ ನೋವಾಗಿದೆ. ಆದರೆ ಅವರು ತಮ್ಮ ಎಂದಿನಂತೆ ಉತ್ಸಾಹದಿಂದ ಶ್ರೀ ದೇವರ ಮಂದಿರ ನಿರ್ಮಾಣಕ್ಕೆ ನಮ್ಮೊಂದಿಗೆ ಹಕರಿಸಿ ನಮಗೆ ಅನುಗ್ರಹಿಸಿದ್ದಾರೆ ಎಂದು ಹೇಳಿದರು.

ವೇದಮೂರ್ತಿ ಪೆರ್ಣಂಕಿಲ ಹರಿದಾಸ್ ಭಟ್ ಅವರು ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ, ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯ ತೇ ನಮಃ - ಲೋಕ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸುವ ಯತಿಕುಲ ತಿಲಕರು, ವಾಮನ ಮೂರ್ತಿಯಾದರೂ ಅದ್ಭುತ ಗಾತ್ರದ ವ್ಯಕ್ತಿತ್ವವುಳ್ಳ ಶ್ರೀಪಾದರು, ಕಾಮಿತಾರ್ಥ ಪ್ರದಾಯಕರು-ನಮ್ಮ ಅಭಿಲಾಷೆಯನ್ನು ಈಡೇರಿಸುವವರು, ಪೂರ್ವಾಶ್ರಮದಲ್ಲಿ ವೆಂಕಟರಮಣನೆಂದು ನಾಮಾಂಕಿತರಾದ ಪೂಜ್ಯ ಶ್ರೀಪಾದರು ಶ್ರೀನಿವಾಸರಾಗಿ ನಮಗೆಲ್ಲಾ ಅನುಗ್ರಹಿಸಿದಾಗಗೋಕುಲ ಶ್ರೀ ಕೃಷ್ಣ ಮಂದಿರ ನಿರ್ಮಾಣದ ಕನಸು ಶೀಘ್ರದಲ್ಲಿ ಸಾಕಾರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ' ಎಂದರು.

ಗೋಪಾಲಕೃಷ್ಣ ಮತ್ತು ಬಿಎಸ್‍ಕೆಬಿಎ ಸಂಸ್ಥೆಗಳ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಹಾಗೂ ಪದಾಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಭಕ್ತರನ್ನು ಸೇರಿಸಿಕೊಂಡು ಪೇಜಾವರಶ್ರೀಗಳ ಸಪ್ತಾಹದ ಕೊನೆಯ ರಜತ ತುಲಾಭಾರ ನೆರವೇರಿಸಿದರು. ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷಿ ್ಮೀ ಸುರೇಶ್ ರಾವ್ ದಂಪತಿ ಆರತಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಶೇಖರ್ ಸಾಲ್ಯಾನ್, ಡಾ| ಮನೋಜ್ ಹುನ್ನೂರು, ಸುರೇಂದ್ರ ಕುಮಾರ್ ಹೆಗ್ಡೆ, ಬಿಎಸ್‍ಕೆಬಿಎ ಗೌ| ಪ್ರ| ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಗೌರವ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಜಿಪಿಟಿ ವಿಶ್ವಸ್ಥ ಮಂಡಳಿ ಗೌ| ಪ್ರ| ಕಾರ್ಯದರ್ಶಿ ಎ.ಎಸ್ ರಾವ್, ವಿಶ್ವಸ್ಥ ಸದಸ್ಯರಾದ ಬಿ.ರಮಾನಂದ ರಾವ್ (ಬಡನಿಡಿಯೂರು), ಕೃಷ್ಣ ಆಚಾರ್ಯ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಕೈರಬೆಟ್ಟು ವಿಶ್ವನಾಥ್ ಭಟ್, ಪೇಜಾವರ ಮಠದ ಆಡಳಿತಾಧಿಕಾರಿಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಶುಭಾವಸರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನಾಗಿಸಿ ಶ್ರೀ ಎಸ್.ಕೆ ಉರ್ವಾಳ್ ಮತ್ತು ಶ್ರೀಮತಿ ಪ್ರಫುಲ್ಲಾ ಎಸ್.ಉರ್ವಾಳ್ ಪರಿವಾರದ ಪ್ರಾಯೋಜಕತ್ವದಲ್ಲಿ ಗುರು ಶ್ರೀಮತಿ ಮಂಜುಳಾ ಜಿ.ಭಟ್ ಬಳಗವು ಭಜನಾ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿತು. ರಾಮದಾಸ ಉಪಾಧ್ಯಾಯ ರೆಂಜಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here