ಗ್ರಾಹಕರ ಲಾಭಕರ-ವಿಶ್ವ್ವಾಸರ್ಹ ಸೇವೆಯೇ ನಮ್ಮ ಉದ್ದೇಶ-ಜಯ ಸಿ.ಸುವರ್ಣ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜೂ.05: ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಸ್ವಂತಿಕೆಯ ಪ್ರತಿಷ್ಠೆಯನ್ನು ರೂಪಿಸಿ ಕೊಂಡಿರುವ ಭಾರತ್ ಬ್ಯಾಂಕ್ ತನ್ನ ಸ್ವಸಾಧನಾ ಗುರುತರ ಸೇವೆಗಾಗಿ ಸಹಕಾರಿ ವಲಯದ ಅದೆಷ್ಟೋ ಗೌರವಗಳಿಂದ ಗೌರವಿಸಲ್ಪಟ್ಟಿದೆ. ಗ್ರಾಹಕರ ಲಾಭಕರÀ ಮತ್ತು ವಿಶ್ವ್ವಾಸರ್ಹ ಸೇವೆಯೇ ನಮ್ಮ ಉದ್ದೇಶವಾಗಿದ್ದು ಆದ್ದÀರಿಂದಲೇ ಭಾರತ್ ಬ್ಯಾಂಕ್ ಅಂದರೆ ಆಥಿರ್üಕ ಭದ್ರತೆಯ ಭರವಸೆ ಎಂದು ಗ್ರಾಹಕರಿಂದಲೇ ಕರೆಸಲ್ಪಡುತ್ತಿದೆ ಎಂದು ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ತಿಳಿಸಿದರು.
ಇಂದಿಲ್ಲಿ ಶುಕ್ರವಾರ ಪೂರ್ವಾಹ್ನ ಗೋರೆಗಾಂವ್ ಪೂರ್ವದ ಬ್ರಿಜ್ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ನಡೆಸಲ್ಪಟ್ಟ ಭಾರತ್ ಬ್ಯಾಂಕ್ನ 43ನೇ ಮಹಾಸಭೆ ನಡೆದಿದ್ದು, ಬ್ಯಾಂಕ್ನ ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್ನ ಉಪಾಧ್ಯಕ್ಷ ಶಂಕರ ಡಿ.ಪೂಜಾರಿ ದೀಪಹಚ್ಚಿ ಸಭೆಗೆ ಚಾಲನೆ ನೀಡಿದ್ದು, ಜಯ ಸುವರ್ಣ ಅವರು ಮಹಾಸಭೆಯ ಘನಾಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಯಾಂಕ್ನ ವ್ಯವಹಾರವು ಗತವರ್ಷಕ್ಕಿಂತ 1,892 ಕೋಟಿ ರೂಪಾಯಿ ಅಧಿಕಗೊಂಡಿದ್ದು, ಅದರಂತೆ 10.20% ವ್ಯವಹಾರ ಹೆಚ್ಚಾಗಿದೆ. ನಿವ್ವಳ ಲಾಭವೂ (ನೆಟ್ ಪ್ರಾಫಿಟ್) ರೂಪಾಯಿ 97.16 ಕೋಟಿಯಿದ್ದು, ಠೇವಣಿಯೂ1,088 ಕೋಟಿ ವೃದ್ಧಿಯಾಗಿದ್ದು ಆ ಪ್ರಕಾರ 10.08% ಹೆಚ್ಚಾಗಿದೆ. ಮುಂಗಡ (ಎಡ್ವಾನ್ಸಸ್) 804 ಕೋಟಿ ಏರಿಕೆ ಆಗಿದ್ದು ಆ ಪ್ರಕಾರ 10.35% ಹೆಚ್ಚಳವಾಗಿದೆ. ಗತ ಸಾಲಿನ ವ್ಯವಹಾರದೊಂದಿಗೆ ಬ್ಯಾಂಕ್ನ ಒಟ್ಟು ವ್ಯವಹಾರ ಇಪ್ಪತ್ತು ಸಾವಿರ ಕೋಟಿ ದಾಟಿದ್ದು ಇದು ಬ್ಯಾಂಕ್ನ ಹೆಗ್ಗುರುತುವಾಗಿ ಇತಿಹಾಸಪುಟ ಸೇರಿದೆ. ದ್ವಿತೀಯ ಶ್ರೇಣಿಯ ಬಂಡವಾಳವನ್ನು ಹೆಚ್ಚಿಸಲು 64.34 ಕೋಟಿ ರೂಪಾಯಿ ಅಧೀನ ಠೇವಣಿಯಾಗಿರಿಸಿ ಸಜ್ಜುಗೊಳಿಸಿದೆ. ಸಾಲಗಾರರ ಪುನರ್ವಸೂಲಿಗಾಗಿ ನ ಅಧಿಕಾರಿಗಳ ಪರಿಶ್ರಮದ ಹೊರತೂ ವಸೂಲಾಗದ ಸಾಲದ ಮೊತ್ತ (ನಿಷ್ಕಾರ್ಯತಾ ಆಸ್ತಿಪಾಸ್ತಿ-ಎನ್ಪಿಎ) ಹೆಚ್ಚಾಗಿದ್ದು, ಅದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಮಾರ್ಗದರ್ಶನದಂತೆ ಕ್ರಮ ಅನುಸರಿಸಲಾಗಿದೆ. ಪ್ರಸ್ತುತ ವರ್ಷ ಎನ್ಪಿಎ ಕಡಿಮೆಗೊಳಿಸುವ ಉದ್ದೇಶದಿಂದ ಸಾಲದ ಮರುಪಾವತಿ ನಿಯಮಗಳನ್ನು ಕಟ್ಟುನಿಟ್ಟಾಗಿಸಿದ್ದೇವೆ. ಬ್ಯಾಂಕ್ನ್ನು ಇನ್ನೂ ಸದೃಢಗೊಳಿಸುವಲ್ಲಿ ಆಡಳಿತ ಮಂಡಳಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ತಂಡದ ಮನೋಭಾವ ಹೆಚ್ಚಿಸಿದ್ದು ಈ ಶ್ರಮದ ಫಲವು ಮುಂದಿನ ದಿನಗಳಲ್ಲಿ ಗ್ರಾಹಕರು ಅನುಭವಿಸಲಿದ್ದಾರೆ. ಬ್ಯಾಂಕ್ನ ಶೆÉೀರುದಾರರಿಗೆ 15% ಡಿವಿಡೆಂಟ್ ನೀಡುತ್ತಿದ್ದೇವೆ ಎಂದÀು ಜಯ ಸುವರ್ಣರು ಬ್ಯಾಂಕ್ನ ವಾರ್ಷಿಕ ಹಿಶೆ ಪ್ರಕಟಿಸಿದರು.
ಬ್ಯಾಂಕ್ನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಸ್ವಾಗತಿಸಿ ಸಭಾ ಕಲಾಪವನ್ನು ನಡೆಸಿ ಬ್ಯಾಂಕ್ನ 2018 -19 ಹಣಕಾಸು ಸಾಲಿನ ಕಾರ್ಯಸಾಧನೆಯನ್ನು ಭಿತ್ತರಿಸಿದರು ಹಾಗೂ ಪಥಸಂಸ್ಥೆಯ ವಾರ್ಷಿಕ ವ್ಯವಹಾರದ ಮಾಹಿತಿ ಪ್ರಕಟಿಸಿ ಪಾಲುದಾರಿಕ ಬಂಡವಾಳ (ಶೇರ್ ಕ್ಯಾಪಿಟಲ್) 304.12 ಕೋಟಿ, ಕಾಯ್ದಿರಿಸಿದ ಸ್ಥಿರನಿಧಿ (ರಿಝರ್ವ್ ಫಂಡ್) 915.28 ಕೋಟಿ, ಸ್ಥಿರ ಠೇವಣಾತಿ (ಫಿಕ್ಸೆಡ್ ಡಿಪಾಜಿಟ್) 9,225.91 ಕೋಟಿ, ಉಳಿತಾಯ ಠೇವಣಾತಿ (ಸೇವ್ಹಿಂಗ್ ಡಿಪಾಜಿಟ್) 1626.35 ಕೋಟಿ, ಚಾಲ್ತಿ ಠೇವಣಾತಿ (ಕರೆಂಟ್ ಫಂಡ್) 759.48 ಕೋಟಿ, ಆವರ್ತ ಠೇವಣಾತಿ (ರೆಕರಿಂಗ್ ಡಿಪಾಜಿಟ್) 211.47 ಕೋಟಿ, ಭಾರತ್ ದೈನಂದಿನ ಠೇವಣಾತಿ (ಭಾರತ್ ಡೈಲಿ ಡಿಪಾಜಿಟ್) 59.55 ಕೋಟಿ ಆಗಿದ್ದು ಗತ ಸಾಲಿನಲ್ಲಿ ಒಟ್ಟು 11,882.76 ಕೋಟಿ ವ್ಯವಹಾರ ನಡೆಸಿದೆ. ನಿಬಿಡ ಆದಾಯ (ಗ್ರೋಸ್ ಇನ್ಕಮ್) 1,266.33 ಕೋಟಿ, ಕಾರ್ಯಮಾನ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ರೂಪಾಯಿ 13,749.03 ಕೋಟಿ ವ್ಯವಹಾರಿಸಿದೆ. ಅಂತೆಯೇ ಈ ಬಾರಿಯೂ ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ (ಆಡಿಟ್ ಕ್ಲಾಸಿಫೀಕೇಶನ್) `ಎ' ದರ್ಜೆಯ ಸ್ಥಾನದೊಂದಿಗೆ ಧೃಡೀಕೃತಗೊಂಡಿದೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಉಪಾಧ್ಯಕ್ಷರುಗಳಾದ ಹರೀಶ್ ಜಿ.ಅವಿೂನ್, ಶ್ರೀನಿವಾಸ ಆರ್.ಕರ್ಕೇರ, ಮಹಿಳಾ ವಿಭಾಗಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಭಾರತ್ ಬ್ಯಾಂಕ್ನ ಉಪಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್, ನಿರ್ದೇಶಕರಾದ ವಾಸುದೇವ ಆರ್.ಕೋಟ್ಯಾನ್ (ಮಾಜಿ ಕಾರ್ಯಾಧ್ಯಕ್ಷ), ಕೆ.ಎನ್ ಸುವರ್ಣ (ಸಾಲ ಸಮಿತಿ ಕಾರ್ಯಾಧ್ಯಕ್ಷ), ಯು.ಶಿವಾಜಿ ಪೂಜಾರಿ (ಲೆಕ್ಕ ಪರಿಶೋಧನಾ ಸಮಿತಿ ಕಾರ್ಯಾಧ್ಯಕ್ಷ), ಎಲ್.ವಿ ಅವಿೂನ್, ಶಾರದಾ ಸೂರು ಕರ್ಕೇರ, ನ್ಯಾ| ಎಸ್.ಬಿ ಅವಿೂನ್, ನ್ಯಾ| ರಾಜಾ ವಿ.ಸಾಲ್ಯಾನ್, ಜೆ.ಎ ಕೋಟ್ಯಾನ್, ದಾಮೋದರ ಸಿ.ಕುಂದರ್, ಎನ್.ಟಿ ಪೂಜಾರಿ, ಗಂಗಾಧರ್ ಜೆ. ಪೂಜಾರಿ, ಕೆ.ಬಿ ಪೂಜಾರಿ, ಜ್ಯೋತಿ ಕೆ.ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ಸೂರ್ಯಕಾಂತ್ ಜೆ.ಸುವರ್ಣ, ಎಂ.ಎನ್ ಕರ್ಕೇರ, ಪುರುಷೋತ್ತಮ ಎಸ್.ಕೋಟ್ಯಾನ್, ಪ್ರೇಮನಾಥ್ ಪಿ.ಕೋಟ್ಯಾನ್, ಮೋಹನದಾಸ್ ಎ.ಪೂಜಾರಿ ಮತ್ತು ಅನ್ಭಲ್ಗನ್ ಸಿ.ಹರಿಜನ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಮಹಾಸಭೆಯಲ್ಲಿ ಬ್ಯಾಂಕ್ನ ಶೇರುದಾರರನೇಕರು, ಗ್ರಾಹಕರು, ಹಿತೈಷಿಗಳು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸದಸ್ಯರನೇಕರು, ಬ್ಯಾಂಕ್ನ ಮಾಜಿ ನಿರ್ದೇಶಕರು, ಪ್ರಧಾನ ಪ್ರಬಂಧಕರಾದ ಸುರೇಶ್ ಎಸ್. ಸಾಲ್ಯಾನ್, ದಿನೇಶ್ ಬಿ.ಸಾಲ್ಯಾನ್, ನಿತ್ಯಾನಂದ ಎಸ್.ಕಿರೋಡಿಯನ್ (ಮುಖ್ಯ ಮಾಹಿತಿ ಅಧಿಕಾರಿ), ಉಪ ಪ್ರಧಾನ ಪ್ರಬಂಧಕರಾದ ಪ್ರಭಾಕರ್ ಜಿ.ಸುವರ್ಣ, ವಾಸುದೇವ ಎಂ.ಸಾಲ್ಯಾನ್, ಮಹೇಶ್ ಬಿ.ಕೋಟ್ಯಾನ್, ಜನಾರ್ಧನ್ ಎಂ.ಪೂಜಾರಿ, ಸತೀಶ್ ಎಂ.ಬಂಗೇರಾ, ವಿಶ್ವನಾಥ ಜಿ.ಸುವರ್ಣ, ಸಹಾಯಕ ಮಹಾ ಪ್ರಬಂಧಕರಾದ ರಮೇಶ್ ಹೆಚ್.ಪೂಜಾರಿ, ಜಗದೀಶ್ ನಾರಾಯಣ್,
ಹರೀಶ್ ಹೆಜ್ಮಾಡಿ, ಮಂಜುಳಾ ಎನ್.ಸುವರ್ಣ, ಭಾರತ್ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್ನ ಕಾರ್ಯದರ್ಶಿ ಪ್ರೇಮಾನಂದ ಪೂಜಾರಿ ಭಾರತ್ ಬ್ಯಾಂಕ್ ಸ್ಟಾಫ್ ವೆಲ್ಫೇರ್ ಕ್ಲಬ್ನ ಕಾರ್ಯದರ್ಶಿ ಮೋಕ್ಷ ಕುಂದರ್ ಸೇರಿದಂತೆ ಬ್ಯಾಂಕ್ನ ವಿವಿಧ ಶಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಬ್ಯಾಂಕ್ನ ಸದಸ್ಯರುಗಳಾದ ನ್ಯಾ| ಶಶಿಧರ್ ಕಾಪು, ಸೆವಂತಿಲಾಲ್ ಸಿ.ಶ್ಹಾ, ಜೆ.ವಿ ಪೂಜಾರಿ, ಕೃಷ್ಣಮೂರ್ತಿ ಶೇಷನ್, ಎಂ.ರಾಮಚಂದ್ರನ್, ರಿಚಾರ್ಡ್ ಕೊರೆಯಾ, ಕೇಶವ ಕೆ.ಕೋಟ್ಯಾನ್, ಕೃಷ್ಣರಾಜ್ ಆರ್.ಕೋಟ್ಯಾನ್, ಪ್ರಕಾಶ್ ಅಗರ್ವಾಲ್, ಬಾಲಕೃಷ್ಣ ಕರ್ಕೇರ, ಸೌಕತ್ ಕಾಳಸ್ಕರ್, ವರದ ಉಳ್ಳಾಲ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ಬ್ಯಾಂಕ್ ಅಧಿಕಾರಿ ಯಶೋಧರ್ ಡಿ.ಪೂಜಾರಿ ಪ್ರಾರ್ಥನೆಯನ್ನಾಡಿದರು. ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್.ಕರ್ಕೇರ ವಂದಿಸಿದರು. ರಾಷ್ಟ್ರಗೀತೆ ಮೂಲಕ ಮಹಾಸಭೆ ಸಮಾಪನ ಗೊಂಡಿತು.