ಸೊಸೈಟಿಯ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕು: ರಂಗಪ್ಪ ಸಿ.ಗೌಡ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಆ.17: ಸೊಸೈಟಿಯನ್ನು ಅಭಿವೃದ್ಧಿ ಪಥಕ್ಕೆ ಸಾಗಿಸಲು ನಾವೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾದ ಅವಶ್ಯವಿದೆ. ನಾವೂ ಮನೆಯನ್ನು ಖರೀದಿ ಮಾಡುವವರಿಗೆ ನ್ಯಾಷನಲ್ ಬ್ಯಾಂಕ್ನಲ್ಲಿ ಕೊಡುವಷ್ಟು ದೊಡ್ಡ ಮೊತ್ತದಲ್ಲಿ ಸಾಲವನ್ನು ನೀಡುತ್ತೇವೆ. ನಿಮ್ಮ ಮನೆ ಅಥವಾ ಪ್ಲಾಟ್ ಬೆಲೆಯ 80% ಮೊತ್ತದಷ್ಟು ಸಾಲವನ್ನು 14% ಬಡ್ಡಿಯಲ್ಲಿ ನೀಡಲಾಗುವುದು. ಇದರ ಸದುಪಯೋಗವನ್ನು ಎಲ್ಲಾ ಸದಸ್ಯರು ಪಡೆದುಕೊಳ್ಳಬೇಕು ಎಂದÀು ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಕಾರ್ಯಧ್ಯಕ್ಷ ರಂಗಪ್ಪ ಸಿ.ಗೌಡ ತಿಳಿಸಿದರು.
ಮಹಾನಗರದಲ್ಲಿ ಸೇವಾ ನಿರತ ಜಯಲಕ್ಷ್ಮೀ ಪಥಸಂಸ್ಥೆಯು ತನ್ನ 19ನೇ ವಾರ್ಷಿಕ ಮಹಾಸಭೆಯನ್ನು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಅಂಧೇರಿ ಪೂರ್ವದ ಜೆ.ಬಿ ನಗರದಲ್ಲಿನ ಸತ್ಯನಾರಾಯಣ ಗೋಯೆಂಕಾ ಭವನÀದÀಲ್ಲಿ ಜರುಗಿದ್ದು ಮಹಾಸಭೆಯ ಅಧ್ಯಕ್ಷತೆ ವಹಿಸಿ ರಂಗಪ್ಪ ಗೌಡ ಮಾತನಾಡಿ ಸೊಸೈಟಿಯ ಶೇರುದಾರರಿಗೆ ಲಾಭಾಂಶದ 9%ನ್ನು ಭಾಜ್ಯಂಶ (ಡಿವಿಡೆಂಡ್) ಘೋಷಿಸಿದರು.
ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕಾಧ್ಯಕ್ಷ, ಜಯಲಕ್ಷ್ಮೀ ಕ್ರೆಡಿಟ್ ಸೊಸೈಟಿಯ ಸ್ಥಾಪಕ ನಿರ್ದೇಶಕ ಡಾ| ನಾರಾಯಣ ಆರ್.ಗೌಡ ಸೊಸೈಟಿಯ ನಿರ್ದೇಶಕರನ್ನು ಒಳಗೊಂಡು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯನ್ನಿತ್ತರು. ಮಲ್ಲಿಕಾರ್ಜುನ ಸ್ವಾಮೀಜಿ ಕಾಂಜೂರ್ಮಾರ್ಗ್ ಅವರು ಒಕ್ಕಲಿಗರ ಧೀಶಕ್ತಿ ದೈವೈಕ್ಯ ಮಹಾಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಧನಲಕ್ಷ್ಮೀ ಮಾತೆಗೆ ಪೂಜೆ ನೆರವೇರಿಸಿದರು. ಮಹಿಳಾ ನಿರ್ದೇಶಕಿಯರು ಮಾತೆ ಜಯಲಕ್ಷ್ಮೀಗೆ ಆರತಿ ಬೆಳಗಿಸಿ ಸಭೆಗೆ ಸಾಂಕೇತಿಕವಾಗಿ ಚಾಲನೆಯನ್ನಿತ್ತರು.
ನಾರಾಯಣ ಗೌಡ ಮಾತನಾಡಿ ಮುಂದಿನ ವರ್ಷದಲ್ಲಿ ಜಯಲಕ್ಷ್ಮೀ ಸೊಸೈಟಿಯನ್ನು ಅಭಿವೃದ್ಧಿ ಮಟ್ಟಕ್ಕೆ ಬೆಳ್ಸುವ ಯೋಜನೆಯನ್ನು ಕೈಗೊಂಡಿದ್ದೇವೆ. ಎರಡು ಹೊಸ ಕಛೇರಿಗಳ ವಿಸ್ತರಣೆಯನ್ನು ಹಮ್ಮಿಕೊಂಡಿದ್ದೇವೆ. ಬೆಳವಣಿಗೆಗೆ ಸದಸ್ಯರ ಗ್ರಾಹಕರ ಪೆÇ್ರೀತ್ಸಾಹ ಅಗತ್ಯ ಎಂದರು.
ಸದಸ್ಯರು ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ನಮ್ಮೊಡನೆ ಸಹಕರಿಸಬೇಕು. ಸಾಲ ತೆಗೆದುಕೊಂಡ ಮೇಲೆ ಅದರ ಕಂತುಗಳನ್ನು ಸರಿಯಾದ ಸಮಯಕ್ಕೆ ಪಾವತಿಸುವುದರ ಜೊತೆಗೆ ಸಾಲವನ್ನು ಮರು ಪಾವತಿಸಬೇಕು. ಇಲ್ಲವಾದರೆ ಸಂಸ್ಥೆಯ ಉನ್ನತಿ ಅಸಾಧ್ಯ ಎಂದು ಕಾರ್ಯದರ್ಶಿ ಕೆ.ರಾಜೇ ಗೌಡ ತಿಳಿಸಿದರು.
ಅತಿಥಿü ಅಭ್ಯಾಗತರಾಗಿ ರಾಕೇಶ್ ಸಿಂಗ್, ಅಶೋಕ್ ಗೌಡ, ಕಾಂಗ್ರೇಸ್ ನೇತಾರ ಚಂದ್ರ ಶೆಟ್ಟಿ, ಸಿಎ| ಮಂಜುನಾಥ ಕೆ.ಗೌಡ ವೇದಿಕೆಯಲ್ಲಿ ಆಸೀನರಾಗಿದ್ದು ಸಂದರ್ಭೋಚಿತವಾಗಿ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸೊಸೈಟಿಯ ಉನ್ನತಿಗೆ ಶುಭಾರೈದರು. ಕಾರ್ಯಾಧ್ಯಕ್ಷರು ಮತ್ತು ನಿರ್ದೇಶಕರು ಸೊಸೈಟಿಯ ಸದಸ್ಯರ ಮಕ್ಕಳಿಗೆ ಪಠ್ಯಪುಸ್ತಕ, ವಿದ್ಯಾಥಿರ್ü ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಿ ಸೊಸೈಟಿಯ ಉನ್ನತಿಗಾಗಿ ಶ್ರಮಿಸಿದ ಸರ್ವರ ಅನನ್ಯ ಸೇವೆ ಶ್ಲಾಘಿಸಿ ಅಭಿವಂದಿಸಿದರು.
ಒಕ್ಕಲಿಗರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಜಿತೇಂದ್ರ ಜೆ.ಗೌಡ, ಉದ್ಯಮಿಗಳಾದ ಹಾಗೂ ಸೊಸೈಟಿಯ ಉಪಾಧ್ಯಕ್ಷ ಎ.ಕೆಂಪೇ ಗೌಡ (ರಾಮಣ್ಣ), ಕಾರ್ಯದರ್ಶಿ ಕೆ.ರಾಜೇ ಗೌಡ, ಕೋಶಾಧಿಕಾರಿ ಮುತ್ತೇ ಎಸ್.ಗೌಡ, ನಿರ್ದೇಶಕರಾದ ಅನುಸೂಯ ಆರ್.ಗೌಡ, ದೇವಕಿ ನಾರಾಯಣ ಗೌಡ, ಸುನಂದ ಆರ್.ಗೌಡ, ರಾಹುಲ್ ಯು.ಲಗಡೆ, ಭಾರತಿ ಎಸ್.ಗಾಯ ಕ್ವಾಡ್, ಸುನೀಲ್ ಕೆ.ಅವ್ಹಡ್, ಸುರತ್ ಎನ್.ಯಾದವ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಸೊಸೈಟಿಯ ಪ್ರಬಂಧಕ ಪರ್ಶುರಾಮ್ ಕೆ.ದೌಂಡ್ ಸ್ವಾಗತಿಸಿ ಸಭಾ ಕಲಾಪ ನಡೆಸಿ ಗತ ಸಾಲಿನ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ ಸೊಸೈಟಿಯು ಈ ಬಾರಿಯೂ ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ `ಎ' ದರ್ಜೆ ಸ್ಥಾನದೊಂದಿಗೆ ಧೃಡೀಕೃತಗೊಂಡಿದೆ ಎಂದರು.ಸೊಸೈಟಿಯ ಗ್ರಾಹಕರು, ಹಿಶೆದಾರರು, ಹಿತೈಷಿಗಳು, ಸೊಸೈಟಿಯ ಕರ್ಮಚಾರಿಗಳು, ಪಿಗ್ಮೀ ಸಂಗ್ರಹದಾರರು, ಸಭೆಯಲ್ಲಿ ಹಾಜರಿದ್ದರು.
ಎ.ಕೆಂಪೇ ಗೌಡ ಸ್ವಾಗತಿಸಿದರು. ಕಚೇರಿ ಅಧಿಕಾರಿಗಳಾದ ಆಶಾರಾಣಿ ಬಿ.ಗೌಡ ಗತವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ಪರ್ಶುರಾಮ್ ಕೆ.ದೌಂಡ್ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಭಿತ್ತರಿಸಿದರು. ಲೆಕ್ಕಾಧಿಕಾರಿ ಶಿಲ್ಪಾ ಸಂತೋಷ್ ಮಾಂಡವ್ಕಾರ್ ಲೆಕ್ಕಪತ್ರಗಳ ಮಾಹಿತಿ ನೀಡಿದರು. ಶಿವಕುಮಾರ್ ಹೆಚ್.ಗೌಡ ವಾರ್ಷಿಕ ಬಜೆಟ್ ಮಂಡಿಸಿದರು. ಕೆ.ರಾಜೇ ಗೌಡ ಅಂತರಿಕ ಲೆಕ್ಕಪತ್ರಗಳ ಮಾಹಿತಿ ಮತ್ತು ವಾರ್ಷಿಕ ವ್ಯವಹಾರದ ಮಾಹಿತಿ ನೀಡಿ, ಅತಿಥಿüಗಳನ್ನು ಪರಿಚಯಿಸಿ ಕೃತಜ್ಞತೆ ಸಮರ್ಪಿಸಿದರು.