ಮುಂಬಯಿ, ಅ.22: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಸಿಬ್ಬಂದಿ ಶ್ರೀ ಕೃಷ್ಣ ಬಂಗೇರ ರವರು ತಮ್ಮ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದಿದರು. ಅವರನ್ನು ಗೌರವಿಸುವ ಕಾರ್ಯಕ್ರಮವು ಎಸೋಸಿಯೇಶನಿನ ಕೇಂದ್ರ ಕಛೇರಿ ಬಿಲ್ಲವ ಭವನದಲ್ಲಿ ತಾರೀಕು. 22.07.2019 ರಂದು ಭವನದ ಕಿರು ಸಭಾಗೃಹದಲ್ಲಿ ಜರಗಿತು.
ಕೃಷ್ಣ ಬಂಗೇರರವರ ಪ್ರಾಮಾಣಿಕ ಸೇವೆಯನ್ನು ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿಯವರು ಅಭಿನಂದಿಸಿ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ತಮ್ಮ ಕಾರ್ಯ ಚಟುವಟಿಕೆಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದ ಬಂಗೇರರವರನ್ನು ಶಾಲು, ಪುಷ್ಪಗೌರವ ಹಾಗೂ ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸೋಸಿಯೇಶನಿನ ಕಾರ್ಯಕಾರಿ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಅವರಿಗೆ ಶುಭ ಹಾರೈಸಿದರು. ಗೌ.ಪ್ರ. ಕಾರ್ಯದರ್ಶಿ ಧನಂಜಯ ಶಾಂತಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.