Tuesday 23rd, April 2024
canara news

ಅಮಾಯಕ ಕಾರ್ಮಿಕರಿಗೆ ಅಭಯಾಸ್ತ ಚಾಚಿದ ಸಂತೋಷ್ ಶೆಟ್ಟಿ ಪನ್ವೇಲ್

Published On : 24 May 2020   |  Reported By : Rons Bantwal


(ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.23: ಲಾಕ್‍ಡೌನ್‍ನಿಂದ ಭಾರೀ ಸಂಕಷ್ಟಕ್ಕೊಳಗಾಗಿ ವಲಸೆ ಹೋಗುತ್ತಿರುವ ಕಾರ್ಮಿಕರು ಮತ್ತು ಅನಿವಾಸಿ ಪರ ಪ್ರಾಂತೀಯ ಜನರಿಗೆ ಉಪನಗರದ ರಾಯಗಾಢ ಜಿಲ್ಲೆಯ ಪನ್ವೇಲ್‍ನಿಂದ ಊರಿಗೆ ಹೋಗುವರೇ ಪನ್ವೇಲ್ ಅಲ್ಲಿನ ನಾಮಾಂಕಿತ ಸಮಾಜ ಸೇವಕ, ಯುವ ಉದ್ಯಮಿ, ಪಿಎಂಸಿಸಿ ನಗರ ಸೇವಕ ಬಿಜೆಪಿ ಧುರಿಣ ಸಂತೋಷ್ ಶೆಟ್ಟಿ ಪನ್ವೇಲ್ ಮತ್ತು ತಂಡವು ಸಹಕರಿಸಿತು.

ಯಾರೋ ಟೆಂಪೆÇೀ ಚಾಲಕರು ತಮ್ಮನ್ನು ರಾಜ್ಯದ ಗಡಿಭಾಗಕ್ಕೆ ಬಿಟ್ಟುಬರುವುದಾಗಿ ನಂಬಿಸಿ ಈ ಅಮಾಯಕ ಕಾರ್ಮಿಕರನ್ನು ನ್ಯೂ ಪನ್ವೇಲ್‍ನ ಸೂಪರ್ ಮಾರ್ಕೆಟ್ ಬಳಿ ಇಳಿಸಿದ್ದು ಈ ಬಗ್ಗೆ ಗಮನಿಸಿದ ಸಂತೋಷ್ ಶೆಟ್ಟಿ ಇವರಿಗೆಲ್ಲ್ಲಾ ಆಶ್ರಮದಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ್ದರು. ಜೊತೆಗೆ ಆಹಾರ ಮತ್ತು ನೀರು ಪೂರೈಸಿ ಜೀವನ ವ್ಯವಸ್ಥೆಗೈದು ಆರೋಗ್ಯ ತಪಾಸನೆಗೂ ಸಹಕರಿಸಿದ್ದರು. ಸದ್ಯ ಸ್ಥಳೀಯ ಪೆÇೀಲಿಸ್ ವರಿಷ್ಠಾಧಿಕಾರಿಗಳ ಸಹಯೋಗದಿಂದ ಅವರವರ ಊರಿಗೆ ಕಳುಹಿಸಿ ಕೊಡುವ ಭರವಸೆ ಸಂತೋಷ್ ಶೆಟ್ಟಿ ಕಾರ್ಮಿಕರಿಗೆ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ನಿರಾಧರ ಪರ ಪ್ರಾಂತೀಯರಿಗೆ ಆಧಾರವನ್ನಿತ್ತು ಧೈರ್ಯ ತುಂಬಿ ಸಂತೋಷ್ ಶೆಟ್ಟಿ ಮಾನವೀಯತೆ ಮೆರೆದಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here