(ರೋನ್ಸ್ ಬಂಟ್ವಾಳ್)
ಮುಂಬಯಿ, ಮೇ.30: ಸಾಮಾಜಿಕ ಕಾರ್ಯಕರ್ತ, ಯುವ ನೇತಾರ ರೋಲ್ಫಿ ಡಿಕೊಸ್ಟಾ ಅವರು ಮಂಗಳೂರು ಹೆಜಮಾಡಿ ಇಲ್ಲಿ ಸುಮಾರು 100 ರಿಕ್ಷಾ ಮತ್ತು ಟೆಂಪೆÇ ಚಾಲಕರಿಗÉ ಅಕ್ಕಿ ಮತ್ತು ಮುಖವಾಡ (ಮಾಸ್ಕ್)ಗಳನ್ನು ವಿತರಿಸಿದರು.
ಸಾಲದ ಜೊತೆ ಕಿರಾಣಿ ಕಿಟ್ಗಳನ್ನು ವಿತರಿಸುವ ಮೂಲಕ ಈ ಲಾಕ್ಡೌನ್ ಸಮಯದಲ್ಲಿ ಅನೇಕ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಿರುವ ರೋಲ್ಫಿ ಡಿಕೊಸ್ಟಾ ಅವರು ಚಾಲಕರನ್ನು ಉದ್ದೇಶಿಸಿ ಸ್ವಾಸ್ಥ್ಯ ಸಮಾಜದ ಹೊಣೆ ಎಲ್ಲಾ ನಾಗರಿಕರದ್ದು, ಇದರ ಜೊತೆ ಸ್ಥಾನೀಯ ಪ್ರಯಾಣಕ್ಕೆ ಸ್ಪಂದಿಸುವ ಚಾಲಕರು ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಾಹಿಸಬೇಕು ಎಂದು ಕಿವಿಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ರಿಕ್ಷಾ ಯೂನಿಯನ್ ಅಧ್ಯಕ್ಷ ಶೇಖರ್ ಹೆಜಮಾಡಿ, ಮಾಜಿ ಪಂಚಾಯತ್ ಅಧ್ಯಕ್ಷೆ ಲೀಡಿಯಾ ಪುರ್ಟಾಡೊ ಮತ್ತು ಟೆಂಪೆÇ ಯೂನಿಯನ್ ಅಧ್ಯಕ್ಷ ಸುಭಾಷ್ ಸಾಲಿಯನ್ ಮತ್ತಿತರರು ಉಪಸ್ಥಿತರಿದ್ದರು.