ಮುಂಬಯಿ (ಆರ್ಬಿಐ), ಜು.07: ಕುಂದಾಪುರ ನಾವುಂದ ಇಲ್ಲಿನ ಸೌಹಾರ್ದ ಸಹಕಾರಿಯ ಕಛೇರಿಯಲ್ಲಿ ಕಳೆದ ಭಾನುವಾರ ಗುರುಪೂರ್ಣಿಮೆಯ ಪ್ರಯುಕ್ತ ಗುರುವಂದನೆ ಕಾರ್ಯಕ್ರಮ ಜರುಗಿಸಲ್ಪಟ್ಟಿತು. ಪುಷ್ಪಾಲಂಕಾರ ಮಾಡಿ, ದೀಪ ಬೆಳಗಿಸಿ ಅವಧೂತ ಭಗವಾನ್ ಶ್ರೀಗುರು ನಿತ್ಯಾನಂದ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗುರುವಂದನೆ ನೆರವೇರಿಸಲಾಯಿತು.
ಭಗವಾನ್ ವ್ಯಾಸರ ಸ್ಮರಣೆಯೊಂದಿಗೆ ಗುರುಪೂರ್ಣಿಮೆ ಆಚರಿಸಲಾಗಿದ್ದು, ಸಹಕಾರಿಯ ನಿರ್ದೇಶಕರು ಸಿಬ್ಬಂದಿಯವರು, ಶುಭದಾ ಶಾಲೆಯ ನಿರ್ದೇಶಕ ಆರ್ ಕೆ ಬಿಲ್ಲವ, ಸಂಚಾಲಕ ಶಂಕರ ನಾವುಂದ, ಸಹಕಾರಿಯ ಸಲಹೆಗಾರ ಕೆ.ಪುಂಡಲೀಕ ನಾಯಕ್, ಸಿಇಒ ಪೂಜಾ ಉಪಸ್ಥಿತರಿದ್ದು ನಮನ ಸಲ್ಲಿಸಿ ಗುರುವಂದನೆ ನೆರವೇರಿಸಿದರು.