ಮುಂಬಯಿ (ಆರ್ಬಿಐ), ಜು.27: ಕಳೆದ ಶ್ರವಣ ಶುಕ್ರವಾರ ಶುಭದಿನದಿ ಮಹಾನಗರದಲ್ಲಿನ ವಾಲ್ಕೇಶ್ವರ ಕಾವಲೆ ಮಠದ ಶ್ರೀಶಾಂತದುರ್ಗ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ವಾರ್ಷಿಕ ನಾಗರ ಪಂಚಮಿ (ಮಹಾಪಂಚಮಿ) ನೆರವೇರಿಸಯಿತು.
ಕೋವಿಡ್ ನಿಮಿತ್ತ ಸರಕಾರದ ಆಜ್ಞೆಯಂತೆ ಸರಳವಾಗಿ ಕೆಲವೇ ಭಕ್ತರ ಸಮ್ಮುಖದಲ್ಲಿ ಶಾಸ್ತ್ರಾನುಸಾರ ನಡೆಸಲಾಗಿದ್ದು, ಪರಮ ಪೂಜ್ಯ ಕವಾಲೆ ಮಠಾಧೀಶ ಶ್ರೀಮದ್ ಶಿವಾನಂದ್ ಸರಸ್ವತಿ ಸ್ವಾಮಿ ಮಹಾರಾಜ್ ಅವರ ನಿರ್ದೇಶನದಂತೆ ಮಠದ ಪ್ರಧಾನ ಅರ್ಚಕ ಶ್ರೀ ಶಶಿಕಾಂತ್ ನಾಯಕ್ ಪುಷ್ಪಾಲಂಕೃತ ಗೊಳಿಸಿದ ದುರ್ಗಾದೇವಿಯ ಪೂಜೆ, ನಾಗದೇವರ ಪೂಜೆ, ಆರತಿ ನೆರವೇರಿಸಿ ಕೋವಿಡ್ ಸಾಂಕ್ರಾಮಿಕ ರೋಗ ಶೀಘ್ರವಾಗಿ ನಿರ್ಮೂಲನೆ ಮಾಡಲು ಮತ್ತು ನಾಡಿನ್ನ ಸಮಸ್ತ ಜನತೆಯ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.