Saturday 10th, May 2025
canara news

*ಕಿನ್ನಿಗೋಳಿ ಉಲ್ಲಂಜೆಯಲ್ಲಿ ತಲವಾರ್ ದಾಳಿ : ಸುರತ್ಕಲ್ ದೀಪಕ್ ರಾವ್ ಕೊಲೆ ಆರೋಪಿ ಪರಾರಿ*

Published On : 08 Aug 2020   |  Reported By : Roshan Kinnigoli


ಕಿನ್ನಿಗೋಳಿ ಸಮೀಪದ ಉಲ್ಲಂಜೆ ಎಂಬಲ್ಲಿ ಯುವಕರ ತಂಡವೊಂದರಿಂದ ಸುರತ್ಕಲ್ ದೀಪಕ್ ರಾವ್ ಕೊಲೆ ಆರೋಪಿ ನೌಷಾದ್ ಮೇಲೆ ಏಕಾಏಕಿ ತಲ್ವಾರ್ ದಾಳಿ ನಡೆದು ನೌಷಾದ್ ಜೀವ ಉಳಿಸಿಕೊಂಡು ಎಸ್ಕೇಪ್ ಆದ ಘಟನೆ ಶುಕ್ರವಾರ ಸಂಜೆ ನಡೆದಿದೆ ಎಂದು ತಿಳಿದು ಬಂದಿದೆ.

ದೀಪಕ್ ರಾವ್ ಕೊಲೆ ಆರೋಪಿ ನೌಶದ್ ನ ಮನೆ ಕಿನ್ನಿಗೋಳಿ ಸಮೀಪ ಉಳ್ಳಂಜೆ ಎಂಬಲ್ಲಿ ಇದ್ದು,ಶುಕ್ರವಾರದಂದು ಸಂಜೆ ಯುವಕರ ತಂಡವೊಂದು ಮಾರಕಾಸ್ತ್ರಗಳಿಂದ ಏಕಾಏಕಿ ಕೊಲೆ ಆರೋಪಿ ನೌಶದ್ ನ ಮನೆಗೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಗೊಳಿಸಿದ್ದು,ಮನೆ ಮಂದಿಯೆಲ್ಲಾ ಬೆಚ್ಚಿ ಬಿದ್ದಿದ್ದಾರೆ.ಈ ವೇಳೆ ನೌಶದ್ ಮನೆಯಲ್ಲಿದ್ದು,ದಾಳಿಯನ್ನು ಅರಿತ ನೌಶದ್ ಮನೆಯ ಹಿಂದಿನ ಬಾಗಿಲಿನಿಂದ ಓಡಿ ಪರಾರಿಯಾಗಿ ಜೀವ ಉಳಿಸಿದ್ದಾನೆ ಎನ್ನಲಾಗಿದೆ.ಮನೆಗೆ ನುಗ್ಗಿ ದಾಳಿ ನಡೆಸಲು ಬಂದ ಯುವಕರ ತಂಡವು ತುಳು - ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದರು ಎನ್ನಲಾಗಿದೆ.

ದೀಪಕ್ ರಾವ್ ಕೊಲೆ ಆರೋಪಿಗಳ ನಾಲ್ವರಲ್ಲಿ ಕಿನ್ನಿಗೋಳಿ ಉಳ್ಳಂಜೆಯ ನೌಶದ್ ಕೂಡ ಒಬ್ಬ.

ಘಟನಾ ಸ್ಥಳಕ್ಕೆ ಮೂಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳದಲ್ಲಿ ಪೊಲೀಸ್ ಬಂದೋ ಬಸ್ತ್ ನ್ನು ಮಾಡಲಾಗಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here