ಮುಂಬಯಿ (ಆರ್ಬಿಐ), ಆ.10: ಕಾರ್ಮೆಲ್ ಸಭೆಯ ಪ್ರಾಂತ್ಯಾಧಿಕಾರಿ ಆಗಿ ಚುನಾಯಿತರಾದ ವಂದನೀಯ ರೆ| ಫಾ| ಪಿಯಸ್ ಜೇಮ್ಸ್ ಡಿಸೋಜಾ ಇವರನ್ನು ಮಂಗಳೂರು ಬಜ್ಜೋಡಿ ಇಲ್ಲಿನ ಇನ್ಫೆಂಟ್ ಮೇರಿ ಚರ್ಚ್ನಲ್ಲಿ ಕಳೆದ ಭಾನುವಾರ ಬೆಳಿಗ್ಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಆದಿಯಲ್ಲಿ ಫಾ| ಪಿಯಸ್ ಪ್ರಧಾನ ಯಾಜಕರಾಗಿ ದಿವ್ಯ ಬಲಿಪೂಜೆ ನೆರವೇರಿಸಿದರು. ಪ್ರಾಂತ್ಯಾಧಿಕಾರಿಗಳ ಸಲಹೆದಾರರಾದ ರೆ| ಫಾ| ಮೆಲ್ವಿನ್ ಡಿಕುನ್ಹಾ, ರೆ| ಫಾ| ದೀಪ್ ಫೆರ್ನಾಂಡಿಸ್, ಕಾರ್ಮೆಲ್ ಹಿಲ್ ಸಂತ ಜೋಸೆಫ್'ಸ್ ಪುಣ್ಯಕ್ಷೇತ್ರದ ಮುಖ್ಯಸ್ಥ ರೆ| ಫಾ| ಚಾಲ್ರ್ಸ್ ಸೆರಾವೊ ಹಾಗೂ ಇನ್ಫೆಂಟ್ ಮೇರಿ'ಸ್ ಚರ್ಚ್ನ ಗುರುಗಳಾದ ರೆ| ಫಾ| ಐವನ್ ಡಿಸೋಜಾ, ಫಾ| ಪ್ಯಾಟ್ರಿಕ್ ಲೋಬೊ, ಫಾ| ಜೋಸೆಫ್ ಡಿಸೋಜಾ, ಫಾ| ರಾಯನ್ ಪಿಂಟೊ ಇವರು ಪೂಜೆಯಲ್ಲಿ ಸಹಭಾಗಿಗಳಾಗಿದ್ದರು.
ಭವ್ಯ ಪೂಜೆಯ ನಂತರ ಪ್ರಾಂತ್ಯಾದಿಕಾರಿಗಳಿಗೆ, ಸಲಹೆದಾರರಿಗೆ, ಕಾರ್ಮೆಲ್ ಹಿಲ್, ಸಂತ ಜೋಸೆಫ್'ಸ್ ಪುಣ್ಯಕ್ಷೇತ್ರದ ಗುರುಗಳಾದ ಫಾ| ಚಾಲ್ರ್ಸ್ ಸೆರಾವೊ ಇವರಿಗೆ ಫಾ| ಐವನ್ ಡಿಸೋಜಾ, ಫಾ| ಪ್ಯಾಟ್ರಿಕ್ ಲೋಬೊ, ಪಾಲನ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಸಲ್ಡಾನಾ, ಕಾರ್ಯದರ್ಶಿ ಐರಿನ್ ಪಿಂಟೊ ಇವರು ಸನ್ಮಾನಿಸಿ ಅಭಿನಂದಿಸಿದರು. ಚರ್ಚ್ನಲ್ಲಿ ಸೇವೆ ಸಲ್ಲಿಸಿ ನಿರ್ಗಮಿಸುತ್ತಿರುವ ಫಾ| ಜೋಸೆಫ್ ಡಿಸೋಜಾ ಇವರಿಗೆ ವಿದಾಯವನ್ನು ಹಾಗೂ ಚರ್ಚ್ಗೆ ಹೊಸದಾಗಿ ಬಂದತಹ ಫಾ| ರಾಯನ್ ಪಿಂಟೊ ಇವರಿಗೆ ಸ್ವಾಗತ ಕೋರಲಾಯಿತು. ಜೋಸೆಫ್ ಮಸ್ಕರೇನ್ಹಸ್ ಸನ್ಮಾನ ಕಾರ್ಯಕ್ರಮ ನೆರವೇರಿಸಿ ವಂದಿಸಿದರು.