Saturday 10th, May 2025
canara news

ಬಿಲ್ಲವರ ಸಂಘ ಪೆರ್ಮಂಕಿ ಮತ್ತು ಬಿಜೆಪಿ ಸಕ್ರೀಯ ಕಾರ್ಯಕರ್ತ ವಸಂತ ಕುಮಾರ್ ಪೆರ್ಮಂಕಿ ವಿಧಿವಶ

Published On : 19 Aug 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಆ.19: ಮಂಗಳೂರು ತಾಲೂಕು ಗುರುಪುರ ಇಲ್ಲಿನ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಕುಮಾರ್ ಪೆರ್ಮಂಕಿ (45.) ಇಂದಿಲ್ಲಿ ಬುಧವಾರ ಬೆಳಿಗ್ಗೆ ತೀವ್ರ ಹೃದಯಘಾತದಿಂದ ನಗರದ ಖಾಸಾಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.

ತನ್ನ ಸ್ವನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವಸಂತ ಕುಮಾರ್‍ಗೆ ಏಕಾಏಕಿ ಎದೆನೋವು ಕಾಣಿಸಿ ಕೊಂಡಿದ್ದು ತತ್‍ಕ್ಷಣವೇ ಮಂಗಳೂರುನ ಮಂಗಳ ಆಸ್ಪತ್ರೆಗೆ ರವಾನಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎನ್ನಲಾಗಿದೆ.

ಕೃಷಿಕರಾಗಿ, ಸಮಾಜ ಸೇವಕರಾಗಿದ್ದು, ಬಿಲ್ಲವರ ಸಂಘ ಪೆರ್ಮಂಕಿ ಹಾಗೂ ಸ್ಥಾನೀಯ ಬಿಜೆಪಿ ಪಕ್ಷÀದ ಸಕ್ರೀಯ ಕಾರ್ಯಕರ್ತರಾಗಿ ಪದಾಧಿಕಾರಿಯಾ ಗಿ, ಸುಮಾರು ಹತ್ತು ವರ್ಷಗಳ ಕಾಲ ಉಲಾಯಿಬೆಟ್ಟು (ಪೆರ್ಮಂಕಿ) ಗ್ರಾಮ ಪಂಚಾಯತ್‍ನ ಅಧ್ಯಕ್ಷರಾಗಿ ಓರ್ವ ಯುವ ನಾಯಕನಾಗಿ ಉದಯೋನ್ಮುಖ ಧುರೀಣರಾಗಿದ್ದು ಜನಾನುರೆಣಿಸಿದ್ದರು.

ಮೃತರು ಪತ್ನಿ ಓರ್ವ ಸುಪುತ್ರ ಸೇರಿದಂತೆ ಅಪಾರ ಬಂಧು ಬಳಗ, ಬಂಧು ಮಿತ್ರರನ್ನು ಅಗಲಿದ್ದಾರೆ. ವಸಂತ ಕುಮಾರ್ ಪರಮಾಪ್ತ ಮುಂಬಯಿ ಉದ್ಯಮಿ ಪೆರ್ಮಂಕಿಗುತ್ತು ಅಶೋಕ್ ಪಕ್ಕಳ ಮತ್ತಿತರ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here