ವಿಶೇಷ ಕವಿಗೊಂದು ವಿಶಿಷ್ಠ ನಮನ-ಟೀಂ ಐಲೇಸಾ ತಂಡದ ಆಹ್ವಾನ
ಮುಂಬಯಿ (ಆರ್ಬಿಐ), ಸೆ.07: ಮುಂಬಯಿ ಇಲ್ಲಿನ ದ ವಾಯ್ಸ್ ಆಫ್ ಓಷಿಯನ್ ಹೆಸರಾಂತ ಟೀಂ ಐಲೇಸಾ ತಂಡವು ಲಿಪಿತಜ್ಞ, ಸಂಶೋಧಕ ಡಾ| ಪುಂಡೂರು ವೆಂಕಟರಾಜ ಪುಣಿಂಚತ್ತಾಯ ಅವರ ಸ್ಮರಣೆಯನ್ನಾಗಿಸಿ ಅವರಿಗೊಂದು ಅಕ್ಷರ ನಮನದೊಂದಿಗೆ ಭಾವಗೀತ ಗುಚ್ಛ ಕೊಡಮಾಡುವ ಉದ್ದೇಶದಿಂದ ನೂರವೊಂದು ತುಳು ಭಾವಗೀತೆಗಳ ಕೃತಿ ಪ್ರಕಟಿಸಲು ಕಾರ್ಯಗತವಾಗಿದೆ.
ಆ ಸಲುವಾಗಿ ವಿಶ್ವದಾದ್ಯಂತಪಸರಿಸಿರುವ ತುಳು ಬರಹಗಾರರಿಂದ ಉತ್ತಮ ಗೇಯತೆಯ ತುಳು ಭಾವಗೀತೆಗಳನ್ನು ಆಹ್ವಾನಿಸಿದ್ದು, ಬರಹಗಾರರು ಷರತ್ತುಬದ್ಧದಂತೆ ತಮ್ಮ ಭಾವಗೀತೆಗಳನ್ನು ಇದೇ ಸೆ.20ರ ಒಳಗಾಗಿ ಕಳುಹಿಸಿ ಕೊಡುವರೇ ಈ ಮೂಲಕ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಳು ಮತ್ತು ನಿಬಂಧನೆಗಳಿಗಾಗಿ 9900206046 ಯಾ 9342936622 ಈ ವಾಟ್ಸಪ್ ಸಂಖ್ಯೆಗಳಿಗೆ ಸಂಪರ್ಕಿಸಿ ಅಥವಾ 101tulu.songsilesa@gmail.com ಮೇಯ್ಲ್ ಮೂಲಕ ಆಯೋಜಕರ ನಿಬಂಧನೆಗಳಂತೆ ಭಾವಗೀತೆಗಳನ್ನು ಕಳುಹಿಸಿ ಕೊಡುವರೇ ಆಯೋಜಕರು ತಿಳಿಸಿದ್ದಾರೆ