ಉಜಿರೆ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪುರಾಣ ವಾಚನ - ಪ್ರವಚನ ಕಾರ್ಯಕ್ರಮವನ್ನು ಗುರುವಾರ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಉದ್ಘಾಟಿಸಿ ಶುಭ ಹಾರೈಸಿದರು.
ಕುಮಾರವ್ಯಾಸ ಮಹಾಕವಿಯ “ಕರ್ನಾಟಕ ಭಾರತ ಕಥಾ ಮಂಜರಿ”ಯ ಆಯ್ದ ಭಾಗವನ್ನು ದಿವಾಕರ ಆಚಾರ್ ವಾಚನ ಮಾಡಿದರು ಹಾಗೂ ಉಜಿರೆ ಅಶೋಕ ಭಟ್ ಪ್ರವಚನ ನೀಡಿದರು.
ಶ್ರೀಮತಿ ಶ್ರದ್ಧಾ ಅಮಿತ್, ದೇವಳದ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್, ಎ.ವಿ. ಶೆಟ್ಟಿ, ಭುಜಬಲಿ ಮತ್ತು ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಪ್ರತಿದಿನ ಗಂಟೆ 6.30 ರಿಂದ 8ರ ತನಕ ಪುರಾಣ ವಾಚನ-ಪ್ರವಚನ ನಡೆಯುತ್ತದೆ.