ಪಕ್ಷಿಕೆರೆ ಕೆಮ್ರಾಲ್ ಡಾ. ಬಿ.ಅರ್ ಅಂಬೇಡ್ಕರ್ ಭವನ ಮತ್ತು ಇಂಟರ್ಲಾಕ್ ಉದ್ಘಾಟನಾ ಕಾರ್ಯಕ್ರಮವನ್ನು .ಶಾಸಕರಾದ ಉಮನಾಥ್ ಕೋಟ್ಯಾನ್ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋಡ್ದಬ್ಬು ದೈವಸ್ಥಾನ ಪಕ್ಷಿಕೆರೆ ಇದರ ಆವರಣ ಗೋಡೆಗೆ 10 ಲಕ್ಷ ರೂಪಾಯಿ ಅನುದಾನ ಒದಗಿಸಿದ್ದು ಶೀಘ್ರ ಕಾಮಗಾರಿ ನಡೆಸುವ ಮೂಲಕ ಹೆಚ್ಚುವರಿ ಅನುದಾನ ಬೇಕಾದಲ್ಲಿ ನೀಡುವ ಬಗ್ಗೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಶುಭಲತಾ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗೇಶ್ ಅಂಚನ್ ತಾಲೂಕ್ ಪಂಚಾಯತ್ ಸದಸ್ಯೆ ವಜ್ರಾಕ್ಷಿ ಶೆಟ್ಟಿ,ಜಿಲ್ಲಾ ಪಂಚಾಯತ್ ಸದಸ್ಯರಾದ ವಿನೋದ್ ಬೊಳ್ಳೂರು,ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್,ಆಡಳಿತ ಅಧಿಕಾರಿ ಸಚಿನ್ ಕುಮಾರ್,ಡಿಎಸ್ಎಸ್ ಮುಖಂಡ ಅಶೋಕ್ ಕೊಂಚಾಡಿ,ಕೋರ್ದಬ್ಬು ದೇವಸ್ಥಾನ ಇದರ ಗುರಿಕಾರ ಸತೀಶ್.ಜಿ.ಅಮೀನ್ ಮತ್ತು ಕೊರ್ದಬ್ಬು ದೈವಸ್ಥಾನ ಕೆಮ್ರಾಲ್ ಸಮಿತಿ ಇದರ ಗೌರವಾಧ್ಯಕ್ಷರಾದ ಬಾಲಾದಿತ್ಯ ಅಳ್ವ ಹಾಗೂ ಇತರ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು..