ಮುಂಬಯಿ, ಸೆ.17: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನಕಾಶಿ ಪ್ರಸಿದ್ಧಿಯ ಮೂಡಬಿದ್ರೆ ಅಲಂಗಾರು ಅಕ್ಷಯ ನಿವಾಸದ ಚಂದು ಶೆಟ್ಟಿ ಮತ್ತು ವೀರಮ್ಮ ಶೆಟ್ಟಿ ದಂಪತಿ ಸುಪುತ್ರ, ರೇ ರೋಡ್ನ ಲಕ್ಕಿ ರೆಸ್ಟೋರೆಂಟ್ ಮುಖೇನ ಲಕ್ಕೀ ರಾಜಣ್ಣ ಪ್ರಸಿದ್ಧಿಯ, ವಸಾಯಿ ಇಲ್ಲಿನ ಹೊಟೇಲ್ ಅಕ್ಷಯ ಇದರ ಮಾಲೀಕ ರಾಜು ಸಿ.ಶೆಟ್ಟಿ ವಸಾಯಿ (ಲಕ್ಕೀ ರಾಜಣ್ಣ) ನಿಧನ (81.) ಕಳೆದ ಬುಧವಾರ ಅಲ್ಪ ಕಾಲದ ಅಸೌಖ್ಯದಿಂದ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಿಧನರಾದರು.
ಯೋಗ ಶಿಕ್ಷಕಿ, ಕೊಡುಗೈದಾನಿ, ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಗೌ| ಪ್ರ| ಕಾರ್ಯದರ್ಶಿ ಮತ್ತು ಉಪಾಧ್ಯಕ್ಷೆ, ಬಂಟರ ಸಂಘ ಮುಂಬಯಿ ಇದರ ವಸಾಯಿ ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷೆ, ವಸಾಯಿ ಕರ್ನಾಟಕ ಸಂಘ, ವೀರಕೇಸರಿ ಕಲಾವೃಂದ ಸೇರಿದಂತೆ ಹತ್ತು ಹಲವಾರು ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದ ಕುಕ್ಕೆಹಳ್ಳಿ ಸಣ್ಣಮನೆ ಮಹಾಬಲ ಶೆಟ್ಟಿ ಮತ್ತು ಉಪ್ಪೂರು ದೊಡ್ಡಮನೆ ಅಕ್ಕಮಕ್ಕ ಶೆಟ್ಟಿ ದಂಪತಿ ಸುಪುತ್ರಿ ಲಕ್ಷ್ಮೀ ಆರ್.ಶೆಟ್ಟಿ (ತೀರ್ಥಹಳ್ಳಿ) ಇವರನ್ನ ರಾಜು ಶೆಟ್ಟಿ ವರಿಸಿ ಇತ್ತೀಚೆಗಷ್ಟೇ ದಾಂಪತ್ಯ ಬಾಳಿನ ಸ್ವರ್ಣಮಹೋತ್ಸವ ಸಂಭ್ರಮಿಸಿದ್ದರು.
ಮೃತರು ಪತ್ನಿ ಲಕ್ಷಿ ್ಮೀ ಆರ್.ಶೆಟ್ಟಿ, ಎರಡು ಹೆಣ್ಣು, ಓರ್ವ ಗಂಡು ಬಂಧು-ಬಳಗವನ್ನು ಅಗಲಿದ್ದು ರಾಜು ಸಿ.ಶೆಟ್ಟಿ ನಿಧನಕ್ಕೆ ನಾಡಿನ ಅನೇಕ ಗಣ್ಯರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.