ಮುಂಬಯಿ, ಸೆ.19: ಮಂಗಳೂರು ಕಟೀಲು ಇಲ್ಲಿನ ಕುಕ್ಕುಡೇಲ್ ಮನೆತನದ ರಾಜು ಪರಮೇಶ್ವರ ಶೆಟ್ಟಿ (49.) ಕಳೆದ ಬುಧವಾರ (ಸೆ.16) ಅಲ್ಪ ಕಾಲದ ಅಸೌಖ್ಯದಿಂದ ಘಾಟ್ಕೋಪರ್ ಇಲ್ಲಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.
ನವಿಮುಂಬಯಿ ಐರೋಲಿ ಇಲ್ಲಿ ವಾಸವಾಗಿದ್ದ ಮೃತರು ಹೊಟೇಲು ಉದ್ಯಮಿ ಆಗಿದ್ದು ವಿಕ್ರೋಲಿ ಪಾರ್ಕ್ಸೈಟ್ ಇಲ್ಲಿನ ಅಯ್ಯಪ್ಪ ಮಂಡಲದಲ್ಲಿ ಭಕ್ತ ಸೇವಾಕರ್ತರಾಗಿ, ಕೋಶಾಧಿಕಾರಿ ಆಗಿ, ಸಮಾಜ ಸೇವಕರಾಗಿ ಜನಾನುರೆಣಿಸಿದ್ದರು. ಮೃತರು ಪತ್ನಿ ಒಂದು ಗಂಡು, ಒಂದು ಹೆಣ್ಣು ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ.