ಮುಂಬಯಿ (ಆರ್ಬಿಐ), ಅ.16: ಕರ್ನಾಟಕ ಸರಕಾರದ ಮುಜರಾಯಿ, ವಿೂನುಗಾರಿಕೆ, ಬಂದರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿಸಚಿವ ಕೋಟ ಶ್ರೀನಿವಾಸ ಪೂಜಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಪು ಶಾಸಕ ಲಾಲಾಜಿ ಮೆಂಡನ್ ಅವರು ಇಂದಿಲ್ಲಿ ಹೆಜ್ಮಾಡಿ ಕೋಡಿಗೆ ಭೇಟಿ ನೀಡಿದ್ದು ಸುಮಾರು 102 ವರ್ಷಗಳ ಹಳೆಯ ಹಾಗೂ ಧಾರ್ಮಿಕ ಮತ್ತು ಸಮಾಜಿಕ ಸೇವೆಯಲ್ಲಿ ತೊಡಗಿಸಿ ಸದ್ಯ ನಿರ್ಮಾಣ ಹಂತದಲ್ಲಿರುವ ಬಿಲ್ಲವರ ಶ್ರೀ ವಿಠೋಭ ಭಜನಾ ಮಂದಿರಕ್ಕೆ ಭೇಟಿ ನೀಡಿದರು. ಸಚಿವರು ಮಂದಿರ ನಿರ್ಮಾಣದ ಪ್ರಗತಿಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಂದಿರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ದಾಸ್ ಹೆಜ್ಮಡಿ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.