ಮುಂಬಯಿ, ನ.02 (ಆರ್ಬಿಐ): ಭಾರತದ ಉತ್ತರ ಪ್ರದೇಶ ಇಲ್ಲಿನ ಹಳೆ ಫೈಜಾಬಾದ್ ಪ್ರಸ್ತುತ ಅಯೋಧ್ಯೆ ಜಿಲ್ಲೆಯ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮ ಮಂದಿರಕ್ಕೆ ಇಂದಿಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಪೇe ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು ಭೇಟಿ ನೀಡಿದರು.
ಅಯೋಧ್ಯೆ ಅಲ್ಲಿನ ಸಂತರು, ಮಂದಿರ ಸಮಿತಿ ಮುಖ್ಯಸ್ಥರು ಶ್ರೀ ಪಾದರನ್ನು ಸ್ವಾಗತಿಸಿ ನಿರ್ಮಾಣ ಹಂತದ ಕಾಮಗಾರಿ ಬಗ್ಗೆ ಮಾಹಿತಿಯನ್ನಿತ್ತರು. ಈ ಸಂದರ್ಭದಲ್ಲಿ ಭವ್ಯ ರಾಮ ಮಂದಿರದ ಕನಸು ಕಂಡ ತಮ್ಮ ಗುರುವರ್ಯ ಕೃಷ್ಣಕ್ಯೈ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿಕೊಂಡರು.