ಮುಂಬಯಿ (ಆರ್ ಬಿಐ),ನ.05: ಚರ್ನಿರೋಡ್ ನಿವಾಸಿ ಮೂಲತಃ ಹೆಜಮಾಡಿ ಸುಖ ನಿವಾಸದ ರತ್ನಾ ರಾಮಣ್ಣ ಶೆಟ್ಟಿ (75.) ಕಳೆದ ಮಂಗಳವಾರ ನಿಧನ ಹೊಂದಿದರು.
ಹೆಜಮಾಡಿಯ ಹೆಸರಾಂತ ನಿವೃತ್ತ ಶಿಕ್ಷಕ ಹಾಗೂ ಸಮಾಜ ಸೇವಕರಾದ ಹೆಚ್.ಸಂಜೀವ ಶೆಟ್ಟಿ ಅವರ ಸಹೋದರಿಯಾಗಿದ್ದ ಅವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಮುಂಬಯಿ ಇದರ ಸಮಿತಿ ಸದಸ್ಯ, ಪುತ್ರ ಸುಜಿತ್ ಶೆಟ್ಟಿ, ಸುನೀಲ್ ಶೆಟ್ಟಿ ಸುಪುತ್ರಿಯರಾದ ಮಲ್ಲಿಕಾ ಶೆಟ್ಟಿ, ವಿದ್ಯಾಶೆಟ್ಟಿ ಹಾಗೂ ಬಂಧು ಬಳಗ ಅಗಲಿದ್ದಾರೆ.
ಮೃತರ ನಿಧನಕ್ಕೆ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಮುಂಬಯಿ ಸದ್ಯಸರು ಶೋಕವನ್ನು ವ್ಯಕ್ತಪಡಿಸಿ ಅಗಲಿದ ಅವರ ಆತ್ಮಕ್ಕೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದ್ದಾರೆ.