ಮುಂಬಯಿ (ಆರ್ಬಿಐ),ನ.11: ತೆಂಕು ಹಾಗೂ ಬಡಗುತಿಟ್ಟುಯಕ್ಷಗಾನಅಲ್ಲದೆತಾಳಮದ್ದಳೆ ಕೂಟಗಳಲ್ಲಿ ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ತನ್ನಅಸಾಮಾನ್ಯ ವಿದ್ವತ್ಪೂರ್ಣಮಾತುಗಾರಿಕೆ ಹಾಗೂ ಅಭಿನಯದ ಮೂಲಕ ರಂಜಿಸುತ್ತಿದ್ದ ಹಿರಿಯಕಲಾವಿದ ವಾಸುದೇವ ಸಾಮಗ ನಿಧನಕ್ಕೆದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಪುರಾಣ ಹಾಗೂ ಜನಪದೀಯ ಪ್ರಸಂಗಗಳಲ್ಲಿ ಪರಿಪೂರ್ಣ ವಿದ್ವತ್ ಹೊಂದಿದ್ದಅವರ ನಿಧನದಿಂದ ಪಾರಂಪರಿಕಯಕ್ಷಗಾನದ ಸಾಮಗ ಕುಟುಂಬದಕೊಂಡಿಯೊಂದು ಕಳಚಿದಂತಾಗಿದೆ ಎಂದಿರುವರು. ಕಲ್ಕೂರ ಪ್ರತಿಷ್ಠಾನದಿಂದ ವರ್ಷಂಪ್ರತಿಆಯೋಜಿಸುವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅನೇಕ ವರ್ಷ ವಾಸುದೇವ ಸಾಮಗರ ನೇತೃತ್ವದ ಸಂಯಮಂ ತಂಡದಿಂದ ಯಕ್ಷಗಾನ ತಾಳಮದ್ದಳೆ ಕೂಟಜರಗಿದ್ದು ಈ ಸಂದರ್ಭಕಲ್ಕೂರ ಸ್ಮರಿಸಿದ್ದಾರೆ.