ಎನ್.ಪಿ ಸುವರ್ಣ-ಪ್ರಭಾ ಸುವರ್ಣ ಮುಂಬಯಿ ಪ್ರಾಯೋಜಕತ್ವದಲ್ಲಿ ರಂಗೋಲಿ ಸ್ಪರ್ಧೆ
ಮುಂಬಯಿ (ಆರ್ಬಿಐ), ನ.27: ಹೃದಯವಾಹಿನಿ ಮಂಗಳೂರು ಮತ್ತು ಎಸ್. ಕೆ ಮುನಿಸಿಪಲ್ ಎಂಪ್ಲಾಯ್ಸ್ ಯೂನಿಯನ್ (ರಿ.) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇದೇ ಬರುವ ಡಿ.12ನೇ ಶನಿವಾರ ಒಂದು ದಿನದ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಲಾಗಿದೆ .
ಆ ಪ್ರಯುಕ್ತ ಮಹಿಳೆಯರಿಗೆ ಮತ್ತು ಯುವತಿಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯು ಡಿ.12ನೇ ಶನಿವಾರ ಬೆಳಿಗ್ಗೆ 9.00 ಗಂಟೆಯಿಂದ 10.00 ಗಂಟೆ ವರೆಗೆ ಪುರಭವನ ಮಂಗಳೂರು ಇಲ್ಲಿ ನಡೆಯಲಿರುವುದು .16 ವರ್ಷದಿಂದ 60 ವರ್ಷಗಳೊಳಗಿನ ಯುವತಿಯರು ಹಾಗೂ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ವಿಜೇತರಾದವರಿಗೆ ಪ್ರಥಮ ಬಹುಮಾನ ರೂ.3000/-, ದ್ವಿತೀಯ ರೂ.1100/- ಹಾಗೂ ತೃತೀಯ ರೂ.1000/- ನೀಡಲಾಗುವುದು. ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೂ ಪ್ರಶಂಸನಾಪತ್ರ ನೀಡಲಾಗುವುದು. ರಂಗೋಲಿ ಬಿಡಿಸಲು ಬೇಕಾದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು ಹಾಗೂ ಸ್ಪರ್ಧೆಯ ವೇಳೆ ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ನೋಂದಣಿಗೆ ಡಿ.7 ಕೊನೆಯ ದಿನವಾಗಿದೆ.
ರಂಗೋಲಿ ಬಿಡಿಸುವ ಕ್ಷೇತ್ರದ ಅಳತೆ 1.20ಮೀ x 1.20ಮೀ (4 ಅಡಿ x 4 ಅಡಿ) ಮಿತಿ ಒಳಗಿರಬೇಕು. ನೋಂದಾಯಿಸಿಕೊಳ್ಳಲು ಹೆಸರು ಮತ್ತು ವಿಳಾಸವನ್ನು 9886510087ವಾಟ್ಸಪ್ಗೆ ಕಳುಹಿಸಬೇಕು. ನೋಂದಣಿ ಖಚಿತ ಪಡಿಸಲು ಕ್ರಮಸಂಖ್ಯೆ ನಿಮ್ಮ ವಾಟ್ಸಪ್ಗೆ ಕಳುಹಿಸಲಾಗುವುದು. ಸೀಮಿತ ಸ್ಪರ್ಧಿಗಳಿಗೆ ಅವಕಾಶ ಇರುವುದರಿಂದ ಮೊದಲು ಹೆಸರು ನೀಡಿದವರಿಗೆ ಆದ್ಯತೆ ನೀಡಲಾಗುವುದು. ಸ್ಪರ್ಧಿಗಳಿಗೆ ಬೆಳಿಗ್ಗೆ 8-30 ಗಂಟೆಗೆ ಉಪಹಾರದ ವ್ಯವಸ್ಥೆ ಇದೆ. ಸ್ಪರ್ಧೆಯ ಫಲಿತಾಂಶ ಮತ್ತು ಬಹುಮಾನ ವಿತರಣೆ ಮಧ್ಯಾಹ್ನ ನಡೆಸಲಾಗುವುದು. ಎನ್ .ಪಿ ಸುವರ್ಣ ಮತ್ತು ಪ್ರಭಾ ಸುವರ್ಣ ಮುಂಬಯಿ ಇವರು ರಂಗೋಲಿ ಸ್ಪರ್ಧೆಯ ಬಹುಮಾನದ ಪ್ರಾಯೋಜಕರಾಗಿರುವರು.