Saturday 10th, May 2025
canara news

ಮುಂಬಯಿ ವಾಯುವ್ಯ ಎನ್‌ಸಿಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿ ನಿರಂಜನ್ ಲಕ್ಷ್ಮಣ್ ಪೂಜಾರಿ ಚಿತ್ರಾಪು ನೇಮಕ

Published On : 20 Dec 2020   |  Reported By : Rons Bantwal


ಮುಂಬಯಿ ಆರ್ ಬಿಐ), ಡಿ.13: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಇದರ ಮುಂಬಯಿ (ಉತ್ತರ ಪಶ್ಚಿಮ) ವಾಯುವ್ಯ ಎನ್‌ಸಿಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿ
ನಿರಂಜನ್ ಲಕ್ಷ್ಮಣ್ ಪೂಜಾರಿ ಚಿತ್ರಾಪು ಇವರನ್ನು ಪಕ್ಷದ ವರಿಷ್ಠರು ನೇಮಕ ಗೊಳಿಸಿದ್ದಾ ರೆ.

ಎನ್‌ಸಿಪಿ ವರಿಷ್ಠ ನೇತಾರ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಇವರ ಹುಟ್ಟುಹಬ್ಬದ ಶುಭಾವಸರದಲ್ಲಿ ಕಳೆದ ಶನಿವಾರ ಜೋಗೇಶ್ವರಿ ಇಲ್ಲಿನ ಪಕ್ಷದ ಕಚೇರಿಯಲ್ಲಿ ನಡೆಸಲಾದ ಜನ್ಮೋತ್ಸವ ಆಚರಣಾ ಕಾರ್ಯಕ್ರಮದಲ್ಲಿವಾಯುವ್ಯ ಎನ್‌ಸಿಪಿ ಜಿಲ್ಲಾಧ್ಯಕ್ಷ ಅಜಿತ್ ರಾವರಾಣೆ, ಎನ್ ಸಿಪಿ ಜಿಲ್ಲಾ ವೀಕ್ಷಕ ತಾಜುದ್ದೀನ್ ಇನಾಮ್ದಾರ್, ಮುಂಬಯಿ ಎನ್‌ಸಿಪಿ ಉಪಾಧ್ಯಕ್ಷ ಲಕ್ಷ್ಮಣ್ ಸಿ. ಪೂಜಾರಿ ಮತ್ತು ಜೋಗೇಶ್ವರಿ ತಾಲ್ಲೂಕು ಅಧ್ಯಕ್ಷ ಆರ್.ವಿ ಮಯೇಕರ್ ಮತ್ತಿತರ ಧುರೀಣರು ಉಪಸ್ಥಿತರಿದ್ದು ನಿರಂಜನ್ ಎಲ್. ಪೂಜಾರಿ ಅವರಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೇಮಕಾತಿ ಪತ್ರ ಪ್ರದಾನಿಸಿ ಪದ ಹಸ್ತಾಂತರಿಸಿ ಅಭಿನಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here