Thursday 28th, March 2024
canara news

ಮುಂಬಯಿ (ಸಾಂತಕ್ರೂಜ್) ಪೇಜಾವರ ಮಠದಲ್ಲಿ ಮಧ್ವ ನವಮಿ ಉತ್ಸವ ಆಚರಣೆ

Published On : 24 Jan 2021   |  Reported By : Rons Bantwal


ದೇವರಲ್ಲಿನ ಆಸ್ತಿಕತೆ-ಶ್ರದ್ಧಾಭಕ್ತಿಯಿಂದ ಸಮೃದ್ಧ ಬದುಕು ಪಾವನ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಜ.22: ಉಪನಗರ ಸಾಂತಾಕ್ರೂಜ್ ಪೂರ್ವದಲ್ಲಿನ ಮಧ್ವ ಭವನದ ಪೇಜಾವರ ಮಠದ ಶ್ರೀ ಕೃಷ್ಣ ಸಾನಿಧ್ಯದಲ್ಲಿ ಇಂದಿಲ್ಲಿ ಶುಕ್ರವಾರ ಬೆಳಿಗ್ಗೆ ಮಧ್ವ ನವಮಿ ಉತ್ಸವ ಆಚರಿಸಲಾಯಿತು. ಮಧ್ವಚಾರ್ಯರು ಅದೃಶ್ಯರಾದ ದಿನವಾದ ಇಂದು ಸೌರ ಮಧ್ವಚಾರ್ಯಾಚನೆಯನ್ನು ಧಾರ್ಮಿಕ ಪೂಜಾ ವಿಧಿಗಳೊಂದಿಗೆ ನೆರವೇರಿಸಲಾಯಿತು.

ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಪ್ರಧಾನ ವ್ಯವಸ್ಥಾಪಕ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಪೂಜಾಧಿಗಳನ್ನು ನೆರವೇರಿಸಿ ಅನಂತೇಶ್ವರ ದೇವಸ್ಥಾನದಲ್ಲಿ ಪ್ರವಚನ ಮಾಡುವಾಗಲೇ ಅದೃಶ್ಯರಾಗಿದ್ದು ಮತ್ತೆ ಬರಲೇ ಇಲ್ಲದೆ ಅವರ ವೃಂದಾವನ ಕೂಡ ಆಗಿಲ್ಲ. ಮಧ್ವಚಾರ್ಯರು ಶಾಸ್ತ್ರದ ಬಗ್ಗೆ ಮತ್ತು ದೇವರಲ್ಲಿ ಸಧೃಡ, ಅಪಾರ ಭಕ್ತಿ ನಂಬಿಕೆ ಇದ್ದವರಾಗಿದ್ದರು. ದೇವರ ಭಕ್ತಿ ಮಾಡಿದಾಗಲೇ ಭಗವಂತನು ನಮ್ಮ ಹತ್ತಿರ ಬರುವನು ಮತ್ತು ನಮ್ಮಲ್ಲಿ ನೆಲೆಯಾಗಿ ಸಮೃದ್ಧ ಬದುಕು ಪ್ರಾಪ್ತಿಸುವನು ಎಂಬ ಸಿದ್ಧಾಂತ ಮಧ್ವಾಚಾರ್ಯ ಅವರದ್ದು ಆಗಿತ್ತು. ಅಗಾಧ ಭಕ್ತಿಯಿಂದ ಭಗವಂತನನ್ನು ಕರೆದರೆ ಭಗವಂತ ನಮ್ಮನ್ನು ನೋಡುತ್ತಾನೆ ನಮಗೆ ಒಲಿಯುತ್ತಾನೆ ಎಂಬ ಅಚಲವಾದ ವಿಶ್ವಾಸ ಮಧ್ವಚಾರ್ಯರಿಗೆ ಇತ್ತು .

ಆದ್ದರಿಂದ ದೇವರಲ್ಲಿ ನಾವೂ ಆಸ್ತಿಕರಾಗಿ ಶ್ರದ್ಧಾಭಕ್ತಿಯಿಂದ ಶ್ರೀಹರಿ ರೂಢಿಸಿ ಸಮೃದ್ಧ ಬದುಕು ಪಾವನವಾಗಿಸೋಣ ಎಂದರು.

ಕಾರ್ಯಕ್ರಮಯಲ್ಲಿ ಪರೇಲ್ ಶ್ರೀನಿವಾಸ ಭಟ್, ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ, ಪ್ರಕಾಶ್ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಸೇರಿದಂತೆ ಅನೇಕ ಪುರೋಹಿತರು, ಭಕ್ತಾದಿಗಳು ಉಪಸ್ಥಿತರಿದ್ದು ಮಧ್ವೇಶ ಭಜನಾ ಮಂಡಳಿಯು ಭಜನೆ, ಹರಿನಾಮ ಸಂಕೀರ್ತನೆ ನೇರವೇರಿತು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here