Thursday 28th, March 2024
canara news

ಫೆ.21: ಜೋಗೇಶ್ವರಿ ಪೂರ್ವದ ಗುಂಫಾ ಟೇಕಡಿ ಕೃಷ್ಣ ನಗದಲ್ಲಿನ

Published On : 20 Feb 2021   |  Reported By : Rons Bantwal


ಶ್ರೀ ಜಗದಂಬಾ ಕಾಲ ಭೈರವ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ

ಮುಂಬಯಿ (ಆರ್‍ಬಿಐ), ಫೆ.18: ಮುಂಬಯಿ ಉಪನಗರದಲ್ಲಿನ ಜೋಗೇಶ್ವರಿ ಪೂರ್ವ ನಾರಾಯಣಗಿರಿ ಆಶ್ರಮ ಗುಂಫಾ ಟೇಕಡಿ ಕೃಷ್ಣ ನಗರ್ ಇಲ್ಲಿನ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ಇದೇ ಫೆ.21ನೇ ರವಿವಾರ ವಾರ್ಷಿಕ ಮಹೋತ್ಸವ ಜರಗಲಿದೆ.

ಅಂದು ಬೆಳಿಗ್ಗೆ 8.30 ಗಂಟೆಯಿಂದ ರಾತ್ರಿ ಗಂ 8.30 ಗಂಟೆ ವರೆಗೆ ವಾರ್ಷಿಕ ಮಹೋತ್ಸವ ಜರಗಲಿದೆ. ಈ ನಿಮಿತ್ತ ಬೆಳಿಗ್ಗೆ 8.30 ಗಂಟೆಗೆ ಪ್ರಾರ್ಥನೆ, ಸಂಕಲ್ಪ 25 ಕಲಶಗಳ ಪ್ರತಿಷ್ಠಾ ಪೂಜೆ, ಪ್ರಧಾನ ಹೋಮ ಪಂಚಾಮ್ರತ ಅಭಿಷೇಕ ನವಕ ಕಲಾಭಿಷೇಕ ಮಹಾಪೂಜೆ ತದನಂತರ ಅನ್ನ ಸಂತರ್ಪಣೆ ಜರಗಲಿದೆ. ಸಾಯಂಕಾಲ 6.00 ಗಂಟೆಯಿಂದ ಉತ್ಸವ ಜರಗಲಿದ್ದು ರಾತ್ರಿ 8.00 ಗಂಟೆಗೆ ರಂಗ ಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರಗಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಮಹಾನಗರದಲ್ಲಿನ ಸದ್ಭಕ್ತ ಭಾಂದವರೆಲ್ಲರೂ ಆಗಮಿಸಿ ಪ್ರಸಾದ ಸ್ವೀಕರಿಸಿ ಶ್ರೀ ಜಗದಂಬಾ ಕಾಲಬೈರವ ಪರಿವಾರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಮಂದಿರದ ಪ್ರಧಾನ ಅರ್ಚಕ ಪಾದೂರು ನರಹರ ತಂತ್ರಿ, ಆಡಳಿತ ಮೊಕ್ತೇಸರ ಸಂಜೀವ ಪಿ.ಪೂಜಾರಿ, ಗೌರವ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಹಾಗೂ ಪದಾಧಿಕಾರಿಗಳು ವಿನಂತಿಸಿ ಕೊಂಡಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here