Sunday 11th, May 2025
canara news

ಬಿಜೆಪಿ ಕರ್ನಾಟಕ ಸೆಲ್ ಮುಂಬಯಿ ಸಂಚಾಲಕರಾಗಿ ಸುರೇಶ್ ಅಂಚನ್ ನೇಮಕ

Published On : 07 Mar 2021   |  Reported By : Rons Bantwal


ಮುಂಬಯಿ, ಮಾ.06: ಭಾರತೀಯ ಜನತಾ ಪಕ್ಷದ ಸಕ್ರೀಯ ಕಾರ್ಯಕರ್ತ ಸುರೇಶ್ ಆರ್. ಅಂಚನ್ ಅವರನ್ನು ಬಿಜೆಪಿಯ ಕರ್ನಾಟಕ ಘಟಕ ಮುಂಬಯಿ ಇದರ ಸಂಚಾಲಕರಾಗಿ ಮುಂಬಯಿ ಬಿಜೆಪಿ ಘಟಕದ ಅಧ್ಯಕ್ಷ ಮಂಗಲ್ ಪ್ರಭಾತ್ ಲೋದ ನೇಮಿಸಿದ್ದಾರೆ. ಕಳೆದ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಲೋದ ಅವರು ಅಂಚನ್‍ಗೆ ನೇಮಕಾತಿ ಪತ್ರ ಹಸ್ತಾಂತರಿಸಿ ಶುಭಾರೈಸಿದರು.

ಮುಂಬಯಿ ಸುತ್ತಮುತ್ತಲಿನ ಎಲ್ಲಾ ಸಮುದಾಯದ ಮತ್ತು ದೇವಾಲಯ ಟ್ರಸ್ಟ್‍ಗಳಿಗೆ ತಮ್ಮ ಸದಸ್ಯರನ್ನು ಬಿಜೆಪಿ ಕರ್ನಾಟಕ ಕೋಶಕ್ಕೆ ಸೇರ್ಪಡೆಗೊಳಿಸುವಂತೆ ಲೋದ ಮನವಿ ಮಾಡಿದ್ದಾರೆ. ಬಿಜೆಪಿಯ ಹಿರಿಯ ನಾಯಕ, ಸಂಸದ ಗೋಪಾಲ್ ಸಿ.ಶೆಟ್ಟಿ ಮತ್ತು ಎಲ್ಲಾ ಹಿರಿಯ ಮುಖಂಡರ ಪ್ರಯತ್ನದಿಂದ ಈ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಗಿದೆ. ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಮತ್ತು ಪಕ್ಷದ ಬಲಾಢ್ಯಕ್ಕೆ ನಾನು ಶ್ರಮಿಸುತ್ತಾ ಜನರಲ್ಲಿ ಬಿಜೆಪಿ ಅರಿವು ಮೂಡಿಸುತ್ತೇನೆ ಎಂದು ಅಂಚನ್ ಹೇಳಿದರು. ಅಂಚನ್ ಅವರು ಮುಂಬಯಿನ ಯುವ ಉದ್ಯಮಿ ಹಾಗೂ ಭಾರತ್ ಕೊ.ಅಪರೇಟಿವ್ ಬ್ಯಾಂಕ್‍ನ ಮಾಜಿ ನಿರ್ದೇಶಕ ಆಗಿರುವರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here