Thursday 28th, March 2024
canara news

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಮಂಗಳೂರು

Published On : 29 Apr 2021   |  Reported By : Rons Bantwal


ನೂತನ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆ

ಮುಂಬಯಿ (ಆರ್‍ಬಿಐ), ಎ.28: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ಕೆಡಬ್ಲೂ ್ಯಜೆಎಸ್) ಇದರ ಸಂಚಾಲಕತ್ವದ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಮಂಗಳೂರು ಇದರ ನೂತನ ಆಡಳಿತ ನಿರ್ದೇಶಕ ಮಂಡಳಿಗೆ ಕಳೆದ ಮಂಗಳವಾರ ಚುನಾವಣೆ ನಡೆಯಿತು. ಸಾಮಾನ್ಯ ಒಂಬತ್ತು ಸ್ಥಾನಗಳಿಗೆ ಶ್ರೀನಿವಾಸ ನಾಯಕ್ ಇಂದಾಜೆ, ಭಾಸ್ಕರ್ ರೈ ಕಟ್ಟಾ, ಪುಷ್ಪರಾಜ್ ಬಿ.ಎನ್, ಸುಖ್‍ಪಾಲ್ ಪೆÇಳಲಿ, ಇಬ್ರಾಹಿಂ ಅಡ್ಕಸ್ಥಳ, ಜಿತೇಂದ್ರ ಭಟ್ ಕುಂದೇಶ್ವರ, ಕೆ.ವಿಲ್ಫ್ರೇಡ್ ಡಿಸೋಜಾ, ಆತ್ಮಭೂಷಣ್ ಭಟ್, ಕೇಶವ ಕುಂದರ್ ಮತದಾನದ ಮೂಲಕ ಆಯ್ಕೆಯಾದರು.

ಮಹಿಳಾ ಮೀಸಲು 2 ಸ್ಥಾನಕ್ಕೆ ಸತ್ಯವತಿ ಮತ್ತು ಶಿಲ್ಪಾ ಕುಮಾರಿ ಹಾಗೂ ಹಿಂದುಳಿದ ವರ್ಗ ಎ ಮೀಸಲು 2 ಸ್ಥಾನಗಳಿಗೆ ಮಹಮ್ಮದ್ ಆರೀಫ್ ಪಡುಬಿದ್ರೆ ಮತ್ತು ವಿಜಯ ಕೋಟ್ಯಾನ್ ಪಡು, ಎಸ್‍ಸಿ ಮೀಸಲು ಸ್ಥಾನಕ್ಕೆ ಸುರೇಶ್ ಡಿ.ಪಳ್ಳಿ, ಮತ್ತು ಎಸ್‍ಟಿ ಸ್ಥಾನಕ್ಕೆ ಹರೀಶ್ ಮೋಟುಕಾನ ಅವಿರೋಧವಾಗಿ ಆಯ್ಕೆಯಾದರು.

ಮಂಗಳವಾರ ಮಂಗಳೂರು ಉರ್ವಾ ಲೇಡಿಹಿಲ್ಲ್ ಇಲ್ಲಿನ ಪತ್ರಿಕಾ ಭವನದಲ್ಲಿ ದಿನವಿಡೀ ಚುನಾವಣೆ ನಡೆಸಲ್ಪಟ್ಟಿದ್ದು ಸಹಕಾರಿ ಇಲಾಖಾ ಅಧಿಕಾರಿ ಶಿವಲಿಂಗಯ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಸಂಜೆ ಅಧಿಕೃತವಾಗಿ ಫಲಿತಾಂಶ ಘೋಷಿಸಿ ಬಳಿಕ ವಿಜೇತರಿಗೆ ಮಾನ್ಯತಾಪತ್ರ ನೀಡಿ ಅಭಿನಂದಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here