ಮುಂಬಯಿ (ಆರ್ಬಿಐ), ಮೇ.07: ಉಪನಗರ ಮುಂಬಯಿ ಇಲ್ಲಿನ ಪೆÇವಾಯಿ ನಿವಾಸಿ ತುಷಾರ್ ಜೆ.ಶೆಟ್ಟಿ (37.) ಅಲ್ಪಕಾಲದ ಅನಾರೋಗ್ಯದಿಂದ ಕಳೆದ ರವಿವಾರÀ (ಮೇ.02) ಹಿರಾನಂದನಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ದಹಿಸರ್ನಲ್ಲಿ ಹೊಟೇಲ್ ನಡೆಸುತ್ತಿದ್ದ ಯುವ ಉದ್ಯಮಿ ಆಗಿದ್ದ ಇವರು ಉಡುಪಿ ಮೂಲತ: ಬೋಳಾ ಪರಾಡಿ ಮನೆತನದ ಜಯರಾಮ ಶೆಟ್ಟಿ ಮತ್ತು ಕುರ್ಕಾಲುಬೀಡು ಮೀನಾಕ್ಷಿ ಶೆಟ್ಟಿ ಇವರ ಸುಪುತ್ರರಾಗಿದ್ದ ಮೃತರು ತಂದೆ, ತಾಯಿ, ಪತ್ನಿ, ಸುಪುತ್ರಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.