Thursday 28th, March 2024
canara news

ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ

Published On : 09 May 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಮೇ.08: ರಾಜ್ಯದಲ್ಲಿ ಜನತಾ ಕಫ್ರ್ಯೂ ಜಾರಿಯಲ್ಲಿರುವುದರಿಂದ ನಿರ್ಗತಿಕರು, ಬಡವರಿಗೆ ಔಷಧಿ ಮತ್ತಿತರ ಕೆಲಸಕ್ಕೆ ಆಥಿರ್üಕ ತೊಂದರೆಯಾಗಬಾರದು ಎಂದು ನಿರ್ಗತಿಕರ ಮನೆಗಳಿಗೆ ನೇರವಾಗಿ ನಗದು ನೆರವು ಸೇರಿದಂತೆ ವಿವಿಧ ಯೋಜನೆಯನ್ನು ಡಾ| ಡಿ.ವೀರೇಂದ್ರ ಹೆಗ್ಗಡೆ ದಂಪತಿ ಮುದುವರಿಸಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ತಿಳಿಸಿದರು. ಕೃಷ್ಣ ರಾಜ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಶ್ರೀಕ್ಷೇತ್ರದ ನಿಧಿಯಿಂದ ನಿರ್ಗತಿಕ ಯೋಜನೆಯ ಅಡಿಯಲ್ಲಿ ವೃದ್ಧೆಯೊಬ್ಬರಿಗೆ ಮಾಶಾಸನ ನೆರವಿನ ಹಣವನ್ನು ವಿತರಿಸಿ ಮಮತಾ ಮಾತನಾಡಿದರು.

ವೀರೇಂದ್ರ ಹೆಗ್ಗೆಡೆ ದಂಪತಿಗಳು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ನೂರಾರು ಯೋಜನೆಗಳನ್ನು ಜಾರಿಗೆ ತಂದು ರಾಜ್ಯದಲ್ಲಿ ಲಕ್ಷಾಂತರ ಜನರಿಗೆ ನೆರವಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಈಗ ಮಹಾಮಾರಿ ಕೋರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿ ಸಾವಿರರು ಕುಟುಂಬಗಳ ನೋವಿಗೆ ಕಾರಣವಾಗಿದೆ. ಈ ಕಾರಣದಿಂದ ನಮ್ಮ ಕಛೇರಿಗಳ ಆಥಿರ್üಕ ಚಟುವಟಿಕೆಗಳನ್ನು ಸ್ಥಗಿತ ಮಾಡಿದ್ದರೂ ಕೂಡಾ ಜನರಿಗೆ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ನಾವುಗಳು ನಮ್ಮ ಎಲ್ಲಾ ಪ್ರತಿನಿಧಿಗಳನ್ನು ಬಳಸಿಕೊಂಡು ತಾಲೂಕಿನಲ್ಲಿ ಗುರುತಿಸಿರುವ 64 ಬಡವರು ಹಾಗೂ ನಿರ್ಗತಿಕರಿಗೆ ತಲಾ 750 ರಿಂದ 1000 ರೂಪಾಯಿಗಳ ವರೆವಿಗೆ ಒಟ್ಟು 48,500 ರೂಪಾಯಿಗಳನ್ನು ನೊಂದವರ ಮನೆಗಳಿಗೆ ತೆರಳಿ ವಿತರಣೆ ಮಾಡಿದ್ದೇವೆ. ಲಾಕ್‍ಡೌನ್ ಮುಂದುವರಿದರೆ ಪೂಜ್ಯರ ಸೂಚನೆಯಂತೆ ಮತ್ತಷ್ಟು ಆಥಿರ್üಕ ನೆರವನ್ನು ನೀಡಲಾಗುತ್ತದೆ ಎಂದು ಯೋಜನಾಧಿಕಾರಿ ಮಮತಾಶೆಟ್ಟಿ ತಿಳಿಸಿದರು.

ವಾಹನಗಳ ವ್ಯವಸ್ಥೆ:
ಕೊರೊನಾದಿಂದಾಗಿ ಗ್ರಾಮೀಣ ಭಾಗದ ಜನರಿಗೆ ವಾಹನಗಳ ತೊಂದರೆಯಾಗುತ್ತಿರುವುದನ್ನು ಗಮನಸಿರುವ ಖಾವಂದರು ಗ್ರಾಮೀಣ ಭಾಗದ ಕೊರೊನಾ ಪೀಡಿತರಿಗೆ ಅನುಕೂಲವಾಗಲಿ ಎಂದು ತಾಲೂಕಿನಲ್ಲಿ ನಮ್ಮ ಸಂಘದ ವತಿಯಿಂದ ಎರಡು ಪ್ರಯಾಣಿಕರ ವಾಹನಗಳನ್ನು ಉಚಿತವಾಗಿ ಓಡಿಸಲಾಗುತ್ತಿದೆ. ಯಾರಿಗೆ ವಾಹನದ ಅವಶ್ಯಕತೆ ಇರುತ್ತದೆಯೋ ಅವರು ನಮ್ಮ ಸಂಘದ ಸ್ಥಳೀಯ ಮೇಲ್ವಿಚಾರಕರು ಅಥವಾ ತಾಲೂಕು ಯೋಜನಾಧಿಕಾರಿಗಳಿಗೆ ಕರೆಮಾಡಿದರೆ ನಾವು ಅವರ ಮನೆಯ ಬಾಗಿಲಿಗೆ ವಾಹವನ್ನು ಕಳುಹಿಸಿ ಅವರಿಗೆ ಆರೋಗ್ಯ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡುತ್ತೇವೆ. ಜೊತೆಗೆ ಯಾರಿಗಾದರೂ ಊಟದ ಸಮಸ್ಯೆ ಇರುವುದು ಕಂಡು ಬಂದರೆ ಅವರಿಗೆ ಊಟವ ವ್ಯವಸ್ಥೆ ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ. ಒಟ್ಟಾರೆ ನಮ್ಮ ಸಂಘದ ವತಿಯಿಂದ ಕೊರೊನಾ ಸಂಕಷ್ಟ ಮುಗಿಯುವವರೆವಿಗೂ ಸಾರ್ವಜನಿಕರಿಗೆ ಅಗತ್ಯ ನೆರವನ್ನು ನೀಡಲಾಗುತ್ತದೆ ಎಂದು ಮಮತಾ ಶೆಟ್ಟಿ ತಿಳಿಸಿದರು. ಈ ಸಮಯದಲ್ಲಿ ಶ್ರೀಕ್ಷೇತ್ರ ಯೋಜನೆಯ ಮೇಲ್ವಿಚಾರಕಿ ಎಸ್.ಅನ್ನಪೂರ್ಣ, ಕೆ.ಮಹದೇವಿ ಮತ್ತಿತರರು ಹಾಜರಿದ್ದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here