Saturday 10th, May 2025
canara news

ಮೂಲ್ಕಿ ಮೂಲತಃ ವೃಂದ ಮೋಹನ್‍ದಾಸ್ ಸುವರ್ಣ ದಂಪತಿ ನಿಧನ

Published On : 16 May 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಮೇ.16: ಉಡುಪಿ ಜಿಲ್ಲೆಯ ಮೂಲ್ಕಿ ಮೂಲದ ವೃಂದ ಮೋಹನ್‍ದಾಸ್ ಸುವರ್ಣ (56.) ಇಂದಿಲ್ಲಿ ಭಾನುವಾರ ಮುಂಜಾನೆ ಪರೇಲ್‍ನ ಗ್ಲೋಬಲ್ ಆಸ್ಪತ್ರೆಯಲ್ಲಿ ನಿಧನರಾದರು. ಅಲ್ಪಾವಧಿಯ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಇವರಿಗೆ ಕೆಲದಿನಗಳ ಹಿಂದೆ ಕೊರೋನಾ ಕಾಯಿಲೆ ತಗುಲಿತ್ತು.

ವೃಂದ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಪತಿ ಮೋಹನ್‍ದಾಸ್ ಸುವರ್ಣ (62.) ವಸಾಯಿ ಓಂನಗರದಲ್ಲಿನ ರೋಸ್‍ವೀವ್ಹ್ ಅಪಾರ್ಟ್‍ಮೆಂಟ್‍ನ ತನ್ನ ಸ್ವನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡರು.

ವೃಂದ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ವಸಾಯಿ ಶಾಖೆಯ ಉದ್ಯೋಗಿ ಆಗಿದ್ದರೆ, ಮೋಹನ್‍ದಾಸ್ ಮಹಾನಗರದಲ್ಲಿನ ಖಾಸಾಗಿ ಸಂಸ್ಥೆಯಲ್ಲಿ ಉದ್ಯೋಗಿ ಆಗಿದ್ದರು. ಇವರಿಬ್ಬರೂ ಮೂಲ್ಕಿ ಮೂಲದವರು ಆಗಿದ್ದು ಅನೇಕ ವರ್ಷಗಳಿಂದ ಮುಂಬಯಿಯಲ್ಲಿ ನೆಲೆಯಾಗಿದ್ದರು. ಕೊರೋನಾ ಸೋಂಕಿತೆ ಆಗಿದ್ದ ಕಾರಣ ವೃಂದರ ಅಂತ್ಯಕ್ರಿಯೆಯನ್ನು ದಾದರ್‍ನ ಶಿವಾಜಿನಗರ್ ಚಿತಗಾರದಲ್ಲಿ ಬಿಎಂಸಿ ಅಧಿಕಾರಿಗಳೇ ನೆರವೇರಿಸಿದರು. ಮೋಹನ್‍ದಾಸ್ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗಳ ಬಳಿಕ ಸ್ಥಾನೀಯ ಸಮಾಜ ಸೇವಕ ಸದಾಶಿವ ಎ.ಕರ್ಕೇರ ಮತ್ತಿತರರ ಸಹಯೋಗದೊಂದಿಗೆ ಮೃತರ ಬಂಧುಗಳು ವಸಾಯಿನಲ್ಲಿ ಸಂಜೆ ನೆರವೇರಿಸಿದರು.

ಮೃತ ದಂಪತಿಗಳಿಗೆ ಮಕ್ಕಳು ಇಲ್ಲದಿದ್ದು, ವೃಂದ ಅವರು ಸಹೋದರ ಮತ್ತು ಸಹೋದರಿ ಅಗಲಿದ್ದು ಮೋಹನ್‍ದಾಸ್ ಇಬ್ಬರು ಸಹೋದರರು, ಓರ್ವ ಸಹೋದರಿ ಸೇರಿದಂತೆ ಬಂಧು ಬಳಗ ಅಗಲಿದ್ದಾರೆ.

ವೃಂದ ಮೋಹನ್‍ದಾಸ್ ನಿಧನಕ್ಕೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅವಿೂನ್, ಅಸೋಸಿಯೇಶನ್‍ನ ನಲ್ಲಸೋಫರಾ ವಿರಾರ್ ಸ್ಥಳಿಯ ಕಚೇರಿಯ ಮತ್ತು ಪದಾಧಿಕಾರಿಗಳು, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಯು.ಎಸ್ ಪೂಜಾರಿ, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್ ಮತ್ತು ನಿರ್ದೇಶಕ ಮಂಡಳಿ, ಬ್ಯಾಂಕ್‍ನ ಆಡಳಿತ ನಿರ್ದೇಶಕ ವಿದ್ಯಾನಂದ ಎಸ್.ಕರ್ಕೇರಾ, ಬ್ಯಾಂಕ್‍ನ ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ.ಸಾಲ್ಯಾನ್, ವಿರಾರ್ ನಲ್ಲಸೋಫರಾ ಕರ್ನಾಟಕ ಸಂಘದ ಗೌರವಾಧ್ಯಕ್ಷ ಡಾ| ಶಂಕರ್ ಬಿ.ಶೆಟ್ಟಿ ವಿರಾರ್, ಅಧ್ಯಕ್ಷ ಸದಾಶಿವ ಎ.ಕರ್ಕೇರ, ಮೊಗವೀರ ಸಂಘದ ಯಶೋಧರ್ ಕೋಟ್ಯಾನ್ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here