Saturday 20th, April 2024
canara news

ಧವಳ ಕಾಲೇಜ್ ಮೂಡಬಿದ್ರೆ ಇದರ ನಿವೃತ್ತ ಪ್ರಾಂಶುಪಾಲ ಪೆÇ್ರ| ಕೆ.ದೇವರಾಜ ಹೆಗ್ಡೆ ನಿಧನ

Published On : 21 Jun 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಜೂ.20: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಡಬಿದ್ರೆ ಇಲ್ಲಿನ ಧವಳ ಕಾಲೇಜ್‍ನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಮೈಸೂರು ವಿದ್ಯಾರಣ್ಯಪುರಂ ನಿವಾಸಿ ಪೆÇ್ರ| ಕೆ.ದೇವರಾಜ ಹೆಗ್ಡೆ (79.) ಹೃದಯಾಘಾತದಿಂದ ಕಳೆದ ಶುಕ್ರವಾರ ಮೈಸೂರನ ಸ್ವಗೃಹದಲ್ಲಿ ನಿಧನರಾದರು.

ಮೈಸೂರು ಜೆಎಸ್‍ಎಸ್ ಪ್ರಥಮ ದರ್ಜೆ ಕಾಲೇಜ್‍ನಲ್ಲಿ ಸುಮಾರು ಒಂದುವರೆ ದಶಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನಂತರ ಧವಳ ಕಾಲೇಜ್‍ನಲ್ಲಿ ಪ್ರಾಂಶುಪಾಲರಾಗಿ ನಿವೃತ್ತ ಹೊಂದಿ ಬಳಿಕ ಸಮಾಜ ಸೇವೆಯಲ್ಲಿ ತೊಡಗಿಸಿದ್ದರು.

ಮೃತರು ಪತ್ನಿ, ವಕೀಲ ಮತ್ತು ಉದ್ಯಮಿ ಹರೀಶ್‍ಕುಮಾರ್ ಹೆಗ್ಡೆ, ಬೆಂಗಳೂರು ಪ್ರಾದೇಶಿಕ ಸಾರಿಗೆಯ ಮೋಟಾರು ವಾಹನ ನಿರೀಕ್ಷಕ ಶರತ್ ಹೆಗ್ಡೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಕಳೆದ ಶನಿವಾರ ಮೈಸೂರು ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಲ್ಲಿನ ವಿದ್ಯುತ್ ಚಿತಗಾರದಲ್ಲಿ ನೆರೆವೇರಿಸಲ್ಪಟ್ಟಿತು. ಪೆÇ್ರ| ಕೆ.ದೇವರಾಜ ಹೆಗ್ಡೆ ನಿಧನಕ್ಕೆ ಧವಳ ಕಾಲೇಜ್‍ನ ಆಡಳಿತ ಮಂಡಳಿ, ಬೋಧಕ ವೃಂದ, ವಿದ್ಯಾಥಿರ್üಗಳು ಮತ್ತು ಹಳೆ ವಿದ್ಯಾಥಿರ್üಗಳು ಅಗಲಿದ ದಿವ್ಯಾತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಸಂತಾಪ ಸೂಚಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here