ಮುಂಬಯಿ (ಆರ್ಬಿಐ), ಜೂ.25: ಉಡುಪಿ ಇಲ್ಲಿನ ಅಷ್ಟಮಠಗಳಲ್ಲೊಂದಾದ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಸನ್ಯಾಸಾಶ್ರಮ ಸ್ವೀಕಾರದ 50ನೇ ವರ್ಷ ಮತ್ತು ಶ್ರಿಪಾದರ ಜನ್ಮನಕ್ಷತ್ರದ ಪ್ರಯುಕ್ತ ಕಳೆದ ಗುರುವಾರ ಶ್ರೀಕೃಷ್ಣಮಠದಲ್ಲಿ ಶ್ರೀಪಾದರ ಕರಕಮಲ ಸಂಜಾತರಾದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ವಿಧಿವತ್ತಾಗಿ ವಿರಜಾ ಹೋಮ ಮತ್ತು ಧನ್ವಂತರಿ ಹೋಮ ಋತ್ವಿಜರಿಂದ ನೆರವೇರಿತು.
ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಅಭಿಷೇಕ ನೆರವೇರಿಸಿದರು. ಸೀಮಿತ ಸಂಖ್ಯೆಯಲ್ಲಿ ಶ್ರೀಗಳ ಅಭಿಮಾನಿಗಳು, ಮಠದ ವ್ಯವಸ್ಥಾಪಕ ಗೋವಿಂದರಾಜ್ ಮೊದಲಾದವರಿದ್ದರು.